ವಿದ್ಯಾಪೀಠದಲ್ಲಿ ಸೂಲಿಬೆಲೆ ಭಾಷಣ; ಟೀಂ ಮೋದಿಯಿಂದ ಸ್ಪಷ್ಟನೆ
ವಿದ್ಯಾಪೀಠದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು ಎನ್ನುವ ಘಟನೆಗೆ ಸಂಬಂಧಿಸಿದಂತೆ ಟೀಂ ಮೋದಿ ಸ್ಪಷ್ಟನೆ ನೀಡಿದೆ.
ಬೆಂಗಳೂರು (ಏ. 07): ವಿದ್ಯಾಪೀಠದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಅಡ್ಡಿಪಡಿಸಲಾಯಿತು ಎನ್ನುವ ಘಟನೆಗೆ ಸಂಬಂಧಿಸಿದಂತೆ ಟೀಂ ಮೋದಿ ಸ್ಪಷ್ಟನೆ ನೀಡಿದೆ.
‘ನಿನ್ನೆ ವಿದ್ಯಾಪೀಠದಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಕಾರ್ಯಕ್ರಮವಿತ್ತು. ಐದಾರು ತಿಂಗಳ ಮುನ್ನವೇ ’ರಾಷ್ಟ್ರಧರ್ಮ’ ಎನ್ನುವ ವಿಷಯದ ಕುರಿತು ಮಾತನಾಡಬೇಕೆಂದು ಚಕ್ರವರ್ತಿ ಸೂಲಿಬೆಲೆಯವರಿಗೆ ಹೇಳಲಾಗಿತ್ತು. ಅದೇ ರೀತಿ ಭಾಷಣ ಮಾಡಲು ಹೋದಾಗ ಕಾಂಗ್ರೆಸ್ಸಿನವರೊಂದಷ್ಟು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿದರು. ಚಕ್ರವರ್ತಿ ಸೂಲಿಬೆಲೆಯವರು ಭಾರತ್ ಮಾತಾ ಕಿ ಜೈ ಎಂದರೆ ಅವರು ರಾಹುಲ್ ಗೆ ಜೈಕಾರ ಕೂಗಿದರು.
’ಕೈ’ ಕಾರ್ಯಕರ್ತರಿಂದ ಭಾಷಣಕ್ಕೆ ಅಡ್ಡಿ; ಹಿಂತಿರುಗಿದ ಚಕ್ರವರ್ತಿ ಸೂಲಿಬೆಲೆ
ಇಷ್ಟಾದರೂ ಚಕ್ರವರ್ತಿಯವರು ಕಾರ್ಯಕ್ರಮದಲ್ಲಿ ’ಭಾರತ ವೈಭವ’ ದ ಕಥನವನ್ನು ಸಂಪೂರ್ಣ ಜನರ ಮುಂದಿಟ್ಟರು. ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಪಡಿಸುತ್ತಿದ್ದರೆ ಒಂದಷ್ಟು ದೇಶಭಕ್ತರು ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಕಾಂಗ್ರೆಸ್ಸಿಗರ ಬಾಯ್ಮುಚ್ಚಿಸಿದರು’ ಎಂದು ಟೀಂ ಮೋದಿ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ.