Asianet Suvarna News Asianet Suvarna News

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳರ ಬಿಗಿಪಟ್ಟು: ಐಪಿಎಲ್’ಗೆ ನಡೆಯಲು ಬಿಡಲ್ಲ ಎಂದು ಆಕ್ರೋಶ

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳರು  ಬಿಗಿಪಟ್ಟು ಹಿಡಿದಿದ್ದಾರೆ. ಐಪಿಎಲ್​ ಕ್ರಿಕೆಟ್ ಮ್ಯಾಚ್​ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ  ರೈತರು.  ತಿರುಚಿಯಲ್ಲಿ ಮರಳಲ್ಲಿ  ಮಲಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.  

Tamilnadu Farmers Protest on Cauvery Issue

ಬೆಂಗಳೂರು (ಏ. 06): ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳರು  ಬಿಗಿಪಟ್ಟು ಹಿಡಿದಿದ್ದಾರೆ. ಐಪಿಎಲ್​ ಕ್ರಿಕೆಟ್ ಮ್ಯಾಚ್​ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ  ರೈತರು.  ತಿರುಚಿಯಲ್ಲಿ ಮರಳಲ್ಲಿ  ಮಲಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.  

ಸುಪ್ರೀಂಕೋರ್ಟ್ ಆದೇಶದಂತೆ ತಕ್ಷಣವೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು.  ತಮಿಳುನಾಡಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡಬಾರದು.  ಐಪಿಎಲ್​ ಮ್ಯಾಚ್​ಗಿಂತ ತಮಿಳುನಾಡು ರೈತರೇ ಮುಖ್ಯ. ನಿರ್ವಹಣಾ ಮಂಡಳಿ ರಚನೆಯಾಗದಿದ್ದರೆ IPL ಮ್ಯಾಚ್ ನಡೆಯೋಕೆ ಬಿಡಲ್ಲ ಎಂದು ತಿರುಚಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕರ್ನಾಟಕದ ವಿರುದ್ಧ ಕಿಡಿಕಾರಿದ್ದಾರೆ. 

ನಾಳೆಯಿಂದ ಐಪಿಎಲ್ ಮ್ಯಾಚ್ ಶುರುವಾಗುತ್ತೆ. ತಮಿಳುನಾಡಿನಲ್ಲಿ 8 ಮ್ಯಾಚ್  ನಡೆಯುತ್ತದೆ. ಒಂದು ನಿರ್ವಹಣಾ ಮಂಡಳಿ ರಚಿಸದಿದ್ದರೆ ಐಪಿಎಲ್’ಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Follow Us:
Download App:
  • android
  • ios