ಬೆಂಗಳೂರು(ಸೆ. 23): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರಕಾರದ ಜೊತೆ ವಿಪಕ್ಷಗಳೂ ಕೈಜೋಡಿಸಿವೆ. ಇಂದು ವಿಶೇಷ ಅಧಿವೇಶನದಲ್ಲಿ ಉಭಯ ಸದನಗಳು ಭಾಗವಹಿಸಲಿದ್ದು ಒಮ್ಮತದ ನಿರ್ಧಾರ ಮೂಡುವ ಸಾಧ್ಯತೆ ಇದೆ. ತಮಿಳುನಾಡಿಗೆ ನೀರು ಹರಿಸಬಾರದು ಎಂಬ ನಿರ್ಧಾರವನ್ನು ತೆಗೆದುಕೊಂಡಲ್ಲಿ ಮುಂದೇನಾಗುತ್ತದೆ? ಇಲ್ಲಿದೆ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರ.

Add Asianetnews Kannada as a Preferred SourcegooglePreferred

* ಸರ್ಕಾರ ನೀರು ಬಿಡುವುದಿಲ್ಲ ಎಂದು ನೇರವಾಗಿ ಹೇಳಿ ಆದೇಶ ಉಲ್ಲಂಘಿಸಿಲ್ಲ; ಆದರೆ, ನೀರು ಬಿಡಬೇಕು ಎಂಬ ನ್ಯಾಯಾಲಯದ ಆದೇಶವನ್ನು ಮಾತ್ರ ಮುಂದೂಡಿದೆ.

* ಸಕಾರಣವಿದ್ದಲ್ಲಿ ಕೋರ್ಟ್​​ ಆದೇಶ ಪಾಲನೆಯನ್ನು ವಿಳಂಬ ಮಾಡುವ ಅವಕಾಶ ಇದೆ

* ನೀರು ಬಿಡುಗಡೆ ಮುಂದೂಡಿದ್ದು ಏಕೆ ಎಂಬುದನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯ

* ಅಧಿವೇಶನದಲ್ಲಿ ನಿರ್ಣಯ ಕೈಗೊಂಡರೆ ಸರ್ಕಾರದ ಮೇಲೆ ನೇರ ಆರೋಪ ಬರುವುದಿಲ್ಲ; ಸಿಎಂ ಎಂಬ ಒಬ್ಬ ವ್ಯಕ್ತಿಯ ನಿರ್ಧಾರವಲ್ಲ, ವಿಧಾನಮಂಡಲದ ನಿರ್ಣಯ ಎಂದಾಗುತ್ತದೆ

* ಕೋರ್ಟ್​​ ನಿಂದನೆ ಆರೋಪವು ಇಡೀ ವಿಧಾನಮಂಡಲಕ್ಕೆ ಬರಬೇಕಾಗುತ್ತದೆ; ನಿರ್ಣಯವನ್ನು ನ್ಯಾಯಾಂಗ ಸುಲಭವಾಗಿ ಶಿಕ್ಷಿಸುವಂತಹ ಸಾಧ್ಯತೆ ಇಲ್ಲ; ಒಂದು ವೇಳೆ ಕೈಗೊಂಡರೆ ಅದು ಸಂವಿಧಾನ ಬಿಕ್ಕಟ್ಟು ನಿರ್ಮಾಣಕ್ಕೆ ಕಾರಣವಾಗುತ್ತೆ

* ಅನ್ಯಪೀಠ ಬೇಕಾದರೆ ಹಾಲಿ ದ್ವಿಸದಸ್ಯ ಪೀಠದ ಮುಂದೆಯೇ ಪ್ರಶ್ನೆ ಮಾಡಬೇಕಾಗುತ್ತದೆ; ಇಲ್ಲವೇ, ಬೇರೆ ಪೀಠ ಏರ್ಪಡಿಸಿಕೊಡುವಂತೆ ಸುಪ್ರೀಂ ರಿಜಿಸ್ಟ್ರಾರ್‌ಗೆ ಸರ್ಕಾರ ಮನವಿ ಸಲ್ಲಿಸಬೇಕಾಗುತ್ತೆ

* ವಿಶ್ವಾಸಾರ್ಹತೆ ಪ್ರಶ್ನಿಸುವ ಸರ್ಕಾರದ ನಡವಳಿಕೆ ವಿರುದ್ಧ ನಿರ್ಣಯ ಕೈಗೊಂಡರೆ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತೆ