ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿಗಳು ಈಗ ಹಣ ಕಳೆದುಕೊಂಡು ಪರದಾಟ ನಡೆಸಿದ್ದಾರೆ. ಕಳೆದ ಜೂನ್​ನಲ್ಲಿ ಪರಿಚಯವಾದ ಉಮೇಶ್​ ಎಂಬಾತನನ್ನು ನಂಬಿದ ಗೂರೂಜಿ, ತಮ್ಮ ಕಡೆಯ ಇಬ್ಬರು ಹುಡುಗರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಅದಕ್ಕಾಗಿ ಐದು ಲಕ್ಷ ಹಣವನ್ನು ಕೊಟ್ಟಿದ್ದಾರೆ. ಆದರೆ ಕೆಲಸವೂ ಕೊಡಿಸದೇ ಹಣವನ್ನೂ ವಾಪಾಸ್​ ಕೊಡದಿದ್ದಾಗ ಗೂರೂಜಿ ಎಚ್​ಎಎಲ್​​ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ನೀಡಿದ್ದರು.

ಬೆಂಗಳೂರು(ನ.20): ಬೆಂಗಳೂರಿನ ಸ್ವಾಮೀಜಿಯೊಬ್ಬರು ತಮ್ಮ ಹುಡುಗರಿಗೆ ಲಂಚ ಕೊಟ್ಟು ಸರ್ಕಾರಿ ಕೆಲಸ ಕೊಡಿಸಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.

ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿಗಳು ಈಗ ಹಣ ಕಳೆದುಕೊಂಡು ಪರದಾಟ ನಡೆಸಿದ್ದಾರೆ. ಕಳೆದ ಜೂನ್​ನಲ್ಲಿ ಪರಿಚಯವಾದ ಉಮೇಶ್​ ಎಂಬಾತನನ್ನು ನಂಬಿದ ಗೂರೂಜಿ, ತಮ್ಮ ಕಡೆಯ ಇಬ್ಬರು ಹುಡುಗರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಅದಕ್ಕಾಗಿ ಐದು ಲಕ್ಷ ಹಣವನ್ನು ಕೊಟ್ಟಿದ್ದಾರೆ. ಆದರೆ ಕೆಲಸವೂ ಕೊಡಿಸದೇ ಹಣವನ್ನೂ ವಾಪಾಸ್​ ಕೊಡದಿದ್ದಾಗ ಗೂರೂಜಿ ಎಚ್​ಎಎಲ್​​ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ನೀಡಿದ್ದರು.

ವಂಚನೆ ಪ್ರಕರಣದ ಆರೋಪದ ಮೇಲೆ ಸದ್ಯ ಪೊಲೀಸರು ಉಮೇಶ್​ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಆರೋಪಿ ಉಮೇಶ್​ ತಪ್ಪೊಪ್ಪಿಗೆ ಹೇಳಿಕೆ ಕೂಡ ನೀಡಿದ್ದಾನೆ.