ಲೋಯಾ ಸಾವು ಪ್ರಕರಣ: 2 ಪ್ರಕರಣಗಳನ್ನು ಸುಪ್ರೀಂ'ಗೆ ವರ್ಗಾಯಿಸಲು ಆದೇಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಇತರ ನ್ಯಾಯಾಲಯಗಳಲ್ಲಿರುವ ಮಧ್ಯಂತರ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಬಾರದಂದು ಆದೇಶಿಸಿದೆ.
ನವದೆಹಲಿ(ಜ.22): ಸಿಬಿಐ ನ್ಯಾಯಾಧೀಶ ಬಿ.ಹೆಚ್. ಲೋಯಾ ಅನುಮಾಸ್ಪದ ಸಾವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್'ನಲ್ಲಿದ್ದ 2 ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವರ್ಗಾಯಿಸುವಂತೆ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಇತರ ನ್ಯಾಯಾಲಯಗಳಲ್ಲಿರುವ ಮಧ್ಯಂತರ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಬಾರದಂದು ಆದೇಶಿಸಿದೆ. ಮಹಾರಾಷ್ಟ್ರ ಸರ್ಕಾರ ಲೋಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿದ್ದು, ತುರ್ತು ಪ್ರಕರಣ ಇದಾಗಿರುವ ಕಾರಣ ಈ ಅರ್ಜಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೋರ್ಟ್'ಗಳಿಗೆ ತಿಳಿಸಿದೆ.
ಪೆ.2ರಂದು ವಿಚಾರಣೆ ಬರುವ ಪೀಠದಲ್ಲಿ ಖಾನ್ವಿಲ್ಕರ್ ಹಾಗೂ ಚಂದ್ರಚೂಡ್ ಇರುತ್ತಾರೆ. ಸಂಶಯಾಸ್ಪದವಾಗಿ ಸಾವನ್ನಪ್ಪಿದ ಲೋಯಾ ಅವರು ಸೋಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಯಾಗಿದ್ದು, ಈಗ ಖುಲಾಸೆಯಾಗಿದ್ದಾರೆ.