Asianet Suvarna News Asianet Suvarna News

ಮೇಕೆದಾಟು ಯೋಜನೆಗೆ ರಜನಿ ಅಪಸ್ವರ

ಮೇಕೆದಾಟು ಅಣೆಕಟ್ಟು ಯೋಜನೆಯ ಬಗ್ಗೆ ತಮಿಳು ನಟ ಕಂ ರಾಜಕಾರಣಿ ರಜನೀಕಾಂತ್‌ ಅಪಸ್ವರ ಎತ್ತಿದ್ದಾರೆ.

Super Star rajinikanth now opposing mekedatu plan
Author
Chennai, First Published Dec 14, 2018, 9:16 AM IST

ಚೆನ್ನೈ[ಡಿ.14]: ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲು ಯೋಚಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯ ಬಗ್ಗೆ ತಮಿಳು ನಟ ಕಂ ರಾಜಕಾರಣಿ ರಜನೀಕಾಂತ್‌ ಅಪಸ್ವರ ಎತ್ತಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಯಾವುದೇ ಹಾನಿ ಇಲ್ಲ ಎಂದು ಕರ್ನಾಟಕ ಹೇಳುತ್ತಿದೆ. ಕರ್ನಾಟಕದ ಹೇಳಿಕೆಯಲ್ಲಿ ನಿಜಾಂಶವಿದೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ತಮಿಳುನಾಡಿಗೆ ಬರುವ ನೀರಿನ ಹರಿವಿನ ಪ್ರಮಾಣ ತಗ್ಗಿದರೆ ನಾವು ನ್ಯಾಯಾಲಯದ ಮೊರೆ ಹೋಗಬೇಕು’ ಎಂದು ಹೇಳಿದ್ದಾರೆ.

ಈ ಮೂಲಕ ಕಾವೇರಿ ವಿವಾದದ ಬಳಿಕ ಮತ್ತೊಮ್ಮೆ ಕರ್ನಾಟಕ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ.

Follow Us:
Download App:
  • android
  • ios