ಬೆಂಗಳೂರು(ಸೆ.10): ರಾಜ್ಯದಲ್ಲಿ ಪೊಲೀಸರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರ ಮೇಲೆ ಪೊಲೀಸರ ದಬ್ಬಾಳಿಕೆಗಳು ಹೆಚ್ಚಾಗತೊಡಗಿವೆ. ಕಗ್ಗಲಿಪುರದ ಸಬ್​ ಇನ್ಸ್​ಪೆಕ್ಟರ್​ವೊಬ್ಬ ವ್ಯಕ್ತಿಯೊಬ್ಬನ ಮೇಲೆ ಮನಸೋ ಇಚ್ಚೆ ಥಳಿಸಿದ್ದಾನೆ.

ಕಗ್ಗಲಿಪುರದ ಸಬ್​ ಇನ್​​​ಪೆಕ್ಟರ್​ ಸುನೀಲ್​, ಪ್ರಗತಿ ಟೆಂಟ್​ ಹೌಸ್​ ನಡೆಸುತ್ತಿದ್ದ ಚೆಲುವಯ್ಯ ಎಂಬಾತನ ಮೇಲೆಮನಸೋ ಇಚ್ಚೆ ಥಳಿಸಿದ್ದಾನೆ. ಕಳೆದ ಭಾನುವಾರ ರಾತ್ರಿ ಟೆಂಟ್​ ಹೌಸ್​ ಮುಂದೆ ವ್ಯಕ್ತಿಯೊಬ್ಬನ ಜೊತೆ ಮಾತನಾಡುತ ನಿಂತಿದ್ದ ಚೆಲುವಯ್ಯನ ಮೇಲೆ, ಜೀಪಿನಲ್ಲಿ ಬಂದ ಸಬ್​ ಇನ್ಸ್ ಪೆಕ್ಟರ್​ ಏಕಾ ಏಕಿ ಥಳಿಸಿದ್ದಾರೆ. ಕೇಳಿದರೆ ಕುಡಿದು ಗಲಾಟೆ ಮಾಡ್ತಿದ್ದೀರಾ ಎಂಬ ಉತ್ತರ ಕೊಟ್ಟ ಸಬ್​ ಇನ್ಸ್​ಪೆಕ್ಟರ್​​, ಚೆಲುವಯ್ಯನಿಗೆ ಹೊಡೆಯಬಾರದ ಜಾಗಕ್ಕೆಲ್ಲಾ ಹೊಡೆದಿದ್ದಾನೆ. ಪರಿ ಪರಿ ಬೇಡಿಕೊಂಡರೂ ಬಿಡದ ಸಬ್​ ಇನ್ಸ್​ಪೆಕ್ಟರ್ ರೌದ್ರಾವತಾರ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.