ಕಡಲ ತೀರಕ್ಕೆ ಪ್ರವಾಸಕ್ಕೆ ಹೋದ ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದ ರವೀಂದ್ರನಾಥ ಬೀಚ್ ಸುತ್ತಾಡಲು ಬಂದು ಯುವತಿಯನ್ನು ಚುಡಾಯಿಸಿದ ಮಂಡ್ಯ ಜಿಲ್ಲೆಯ  ಬಿಜಿಎಸ್​ ಕಾಲೇಜು ವಿದ್ಯಾರ್ಥಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.

ಕಾರವಾರ: ಕಡಲ ತೀರಕ್ಕೆ ಪ್ರವಾಸಕ್ಕೆ ಹೋದ ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಕಾರವಾರದ ರವೀಂದ್ರನಾಥ ಬೀಚ್ ಸುತ್ತಾಡಲು ಬಂದು ಯುವತಿಯನ್ನು ಚುಡಾಯಿಸಿದ ಮಂಡ್ಯ ಜಿಲ್ಲೆಯ ಬಿಜಿಎಸ್​ ಕಾಲೇಜು ವಿದ್ಯಾರ್ಥಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.

ಪ್ರವಾಸಕ್ಕೆಂದು ಬೀಚ್​’ಗೆ ಹುಡುಗರು ಆಗಮಿಸಿದ್ದು ಯುವತಿಯೊಬ್ಬಳನ್ನು ಚುಡಾಯಿಸಿದ್ದಾರೆ. ಅದನ್ನು ಸ್ಥಳೀಯರು ಪ್ರಶ್ನಿಸಿದ್ದಕ್ಕೆ, ರಂಪಾಟ ನಡೆಸಿದ ವಿದ್ಯಾರ್ಥಿಗಳು ಡ್ರೈವ್ ಇನ್‌ ಹೊಟೇಲನ್ನೇ ಧ್ವಂಸ ಗೊಳಿಸಿದ್ದಾರೆ.

ಈ ಸಂಬಂಧ ಬಿಜಿಎಸ್​ ಕಾಲೇಜ್​’ನ 54 ಪ್ರವಾಸಿ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.