MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಕೊಟ್ರಯ್ಯ, 'ಮಗ್ಗಿ ಅಜ್ಜಯ್ಯ' ಎಂದೇ ಜನಪ್ರಿಯರಾಗಿದ್ದಾರೆ. ಕೇವಲ 8ನೇ ತರಗತಿ ಓದಿದ್ದರೂ, ಇವರು ಕಂಪ್ಯೂಟರ್‌ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಬಿಡಿಸುವ ಮೂಲಕ 'ಮಾನವ ಕಂಪ್ಯೂಟರ್' ಎನಿಸಿಕೊಂಡಿದ್ದಾರೆ. ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2 Min read
Author : Mahmad Rafik
Published : Mar 08 2026, 01:29 PM IST
Share this Photo Gallery
  • FB
  • TW
  • Linkdin
  • Whatsapp
15
ಮಗ್ಗಿ ಕೊಟ್ರಯ್ಯ ಅಜ್ಜಯ್ಯ
Image Credit : halekotturu Instagram

ಮಗ್ಗಿ ಕೊಟ್ರಯ್ಯ ಅಜ್ಜಯ್ಯ

ಗಣಿತ ಅಂದ್ರೆ ಕಬ್ಬಿಣದ ಕಡಲೆ ಎಂಬ ಮಾತಿದೆ. ಆದ್ರೆ ಈ ಕಡಲೆ ಬಿಡಿಸುವ ವಿಧಾನ ತಿಳಿದುಕೊಂಡ್ರೆ ಗಣಿತದಷ್ಟು ಸುಲಭದ ಮತ್ತೊಂದು ವಿಷಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಇನ್ನು ಗಣಿತ ಬಲ್ಲವ ಎಲ್ಲಾ ವಿಷಯಗಳಲ್ಲಿಯೂ ಜಾಣನಾಗಿರುತ್ತಾನೆ. ಆದರೂ ಇಂದು ಎಷ್ಟೋ ಜನರು ಗಣಿತ ಅಂದ್ರೆ ಹೆದರುತ್ತಾರೆ. ಭಾರತದ ಶಕುಂತಲಾ ದೇವಿ ಅವರನ್ನು ಮಾನವ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಆದ್ರೆ ನಮ್ಮ ರಾಜ್ಯದಲ್ಲಿರುವ ಮಗ್ಗಿ ಕೊಟ್ರಯ್ಯ ಅಜ್ಜಯ್ಯನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.

25
ಕಂಪ್ಯೂಟರ್‌ಗಿಂತಲೂ ವೇಗ
Image Credit : halekotturu Instagram

ಕಂಪ್ಯೂಟರ್‌ಗಿಂತಲೂ ವೇಗ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ನಿವಾಸಿಯಾಗಿರುವ ಕೊಟ್ರಯ್ಯ ಅವರು ಈ ಭಾಗದಲ್ಲಿ ಮಗ್ಗಿ ಅಜ್ಜಯ್ಯ ಎಂದು ಜನಪ್ರಿಯರು. ಇವರ ಲೆಕ್ಕಗಳನ್ನು ಕೇಳಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಸಾಮಾನ್ಯರಲ್ಲಿ ಸಾಮನ್ಯರಂತೆ ಕಾಣುವ ಕೊಟ್ರಯ್ಯ, ಲೆಕ್ಕವನ್ನು ಕಂಪ್ಯೂಟರ್‌ಗಿಂತಲೂ ವೇಗವಾಗಿ ಪರಿಹರಿಸುತ್ತಾರೆ.

Related Articles

Related image1
ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದ Oyo; ಕರ್ನಾಟಕದ ಈ ನಗರಕ್ಕೂ ಓಯೋ ಎಂಟ್ರಿ
Related image2
ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ
35
ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್
Image Credit : halekotturu Instagram

ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್

ಕೊಟ್ರಯ್ಯ ಅಜ್ಜನವರು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ನಮ್ಮ ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್ "ಮಗ್ಗಿ ಕೊಟ್ರಯ್ಯ" ಅಜ್ಜ. ಲಕ್ಷ ಲಕ್ಷ ಕೊಟ್ಟು ಇಂಗ್ಲಿಷ್ ಮೀಡಿಯಂ ಓದಿದವರು, ನಿಮ್ಮ ಮುಂದೆ ಬಚ್ಚಾಗಳು ತಾತ. ಯಪ್ಪಾ ದೇವರೇ, ಎನ್ ಪಾ ಇವರ್ ಟ್ಯಾಲೆಂಟ್. ದೇವರು ನಿಮಗೆ ಒಳ್ಳೆ ಆರೋಗ್ಯ ಕೊಡಲಿ ತಾತ, ಸದಾ ಹಸನ್ಮುಖಿಯಾಗಿರಿ, ನಿಮಗಿರುವ ಟ್ಯಾಲೆಂಟ್‌ಗೆ ಎಷ್ಟು ದುಡ್ಡು ಕೊಟ್ಟರೂ ಸಾಲದು ಎಂದು ಕಮೆಂಟ್ ಮಾಡಿದ್ದಾರೆ.

45
ಗುಣಕಾರದ ಪ್ರಶ್ನೆ
Image Credit : halekotturu Instagram

ಗುಣಕಾರದ ಪ್ರಶ್ನೆ

halekotturu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಕೊಟ್ರಯ್ಯ ಅಜ್ಜನವರ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಒಂದಿಷ್ಟು ಅಂಕೆಗಳ ಗುಣಕಾರದ ಪ್ರಶ್ನೆ ಮಾಡುತ್ತಾರೆ. ಅಜ್ಜಯ್ಯ ಒಂದು ಕ್ಷಣವೂ ಯೋಚಿಸದೇ ಉತ್ತರ ನೀಡುತ್ತಾರೆ. ಇದೆಲ್ಲಾ ಹೇಗೆ ಬರುತ್ತೆ ಅಂತ ಕೇಳಿದಾಗ, ಅಂದಾಜಿನಲ್ಲಿ ಹೇಳುತ್ತೇನೆ ಅಂತಾರೆ. ಈ ಕೊಟ್ರಯ್ಯ ಅಜ್ಜಯ್ಯ ಹೇಳುವ ಪ್ರಕಾರ, ಇವರು 8ನೇ ತರಗತಿವರೆಗೆ ಮಾತ್ರ ಓದಿದ್ದಾರೆ.

55
15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌
Image Credit : halekotturu Instagram

15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌

ಇದೇ ವಿಡಿಯೋದಲ್ಲಿ ಜನರು, ತಮಗೆ ಒಂದಿಷ್ಟು ಹಣದ ಸಹಾಯ ಮಾಡುತ್ತಾರೆ ಅಂತಾನೂ ಹೇಳಿದ್ದಾರೆ. ಮಗ್ಗಿ ಅಜ್ಜಯ್ಯನವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಈ ವಿಡಿಯೋಗೆ 15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ನಿಮಗೂ ಈ ಮಗ್ಗಿ ಅಜ್ಜಯ್ಯವರನ್ನು ನೋಡಿದ್ದೀರಾ? ಅವರೊಂದಿಗೆ ಮಾತನಾಡಿದ್ದೀರಾ? ಅಜ್ಜಯ್ಯ ಜೊತೆಗಿನ ನಿಮ್ಮ ಅನುಭವವನ್ನು ಕಮೆಂಟ್‌ನಲ್ಲಿ ಹಂಚಿಕೊಳ್ಳಿ.

 
 
 
 
View this post on Instagram
 
 
 
 
 
 
 
 
 
 
 

A post shared by HALEKOTTURU (Around Kotturu) (@halekotturu)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಿಜಯನಗರ
ವೈರಲ್ ಸುದ್ದಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Video: ಬೆಂಗಳೂರಿನಲ್ಲಿ ನೆಚ್ಚಿನ ಸ್ಟಾರ್‌ ನೋಡಲು ಬಂದು, ಬಿಸಿ ಬಿಸಿ ಲಾಠಿ ಕಜ್ಜಾಯ ತಿಂದ ಜನರು
Recommended image2
India vs New Zealand: 'ಭಾರತ ಗೆದ್ದೇ ಗೆಲ್ಲುತ್ತೆ..' ಸಚಿವ ಭವಿಷ್ಯ, ಟೀಂ ಇಂಡಿಯಾ ಬಲದ ಬಗ್ಗೆ ತಂಗಡಗಿ ಹೇಳಿದ್ದೇನು?
Recommended image3
Bengaluru: ಇನ್‌ಸ್ಟಾಗ್ರಾಂ ಪ್ರೀತಿ, ಆಮೇಲೆ ವಿಕೃತಿ: ಪ್ರೇಯಸಿ, ಆಕೆಯ ಪೋಷಕರಿಗೂ ಬೆಂಕಿ ಹಚ್ಚಿದ ಪಾಪಿ!
Related Stories
Recommended image1
ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದ Oyo; ಕರ್ನಾಟಕದ ಈ ನಗರಕ್ಕೂ ಓಯೋ ಎಂಟ್ರಿ
Recommended image2
ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved