ಪರೀಕ್ಷೆಗೆ ಹೆದರಿ ಎಸ್’ಎಸ್’ಎಲ್’ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಪರೀಕ್ಷೆಗೆ ಹೆದರಿ ಎಸ್’ಎಸ್’ಎಲ್’ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಿತ್ರದುರ್ಗ (ಮಾ.23): ಪರೀಕ್ಷೆಗೆ ಹೆದರಿ ಎಸ್’ಎಸ್’ಎಲ್’ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹಿರಿಯೂರು ತಾ.ನ ಅಂಬಲಗೆರೆ ಗ್ರಾಮದ ವಿದ್ಯಾರ್ಥಿನಿ ಗೀತಾ (16) ಮೃತ ದುರ್ದೈವಿ. ಮೊದಲು ವಿಷ ಸೇವಿಸಿ ಸಾಯಲು ಯತ್ನಿಸಿ ಪ್ರಾಣ ಹೋಗದೆ ಇದ್ದಾಗ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರದ ಸಂತ ಅನ್ನಮ್ಮ ಫ್ರೌಢಶಾಲೆಯಲ್ಲಿ SSLC ವ್ಯಾಸಂಗ ಮಾಡುತ್ತಿದ್ದಳು. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.