ಬೀದಿನಾಯಿ ಕೊಲ್ಲಲು ಬಂದೂಕುಗಳಿಗೆ ರಿಯಾಯಿತಿ ಘೋಷಿಸಿದ ಸಂಘಟನೆ
ಕೊಚ್ಚಿ (ಅ.07): ಕೇರಳದಲ್ಲಿ ನಿಮಗೆ ಬೀದಿನಾಯಿಗಳನ್ನು ಹೊಡೆದುರುಳಿಸಬೇಕೆಂದಿದ್ದರೆ ಅಥವಾ ಬೀದಿ ನಾಯಿ ಕೊಂದ ಆರೋಪ ನಿಮ್ಮ ಮೇಲಿದ್ದರೆ, ನಿಮಗೆ ಏರ್’ಗನ್’ಗಳು ರಿಯಾಯಿತಿ ದರದಲ್ಲಿ ಒದಗಿಸಲು ಸಂಘಟನೆಯೊಂದು ಮುಂದೆ ಬಂದಿದೆ.
ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು ಈವರೆಗೆ ಕೊಟ್ಟಾಯಂ ಜಿಲ್ಲೆಯಲ್ಲೇ 30 ಬೀದಿನಾಯಿಗಳನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ, ಸಂತ ಥಾಮಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು, ಬೀದಿನಾಯಿಗಳ ಹಾವಳಿಯಿಂದ ಬೇಸತ್ತವರಿಗೆ ಏರ್’ಗನ್ ಖರೀದಿಸಲು ಶೇ.10 ರಿಯಾಯಿತಿ ನೀಡುವುದಾಗಿ ಘೋಷಿಸಿದೆ.
ಆದರೆ ರಿಯಾಯಿತಿ ಪಡೆಯಲು ಬಯಸುವವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಒಂದು ಪ್ರಕರಣ ದಾಖಲಾಗಿರಬೇಕಂತೆ.