Asianet Suvarna News Asianet Suvarna News

ಬಾಗಲಕೋಟೆ ಬಾಲಕಿ ನೇತ್ರಾವತಿಗೆ ಶೌರ್ಯ ಪ್ರಶಸ್ತಿ

ಹುನಗುಂದ ತಾಲೂಕಿನ ಹೊಸೂರಿನ ನೇತ್ರಾವತಿ ಎಂ.ಚವಾಣ್ ಗೆ ಮರಣೋತ್ತರವಾಗಿ ಗೀತಾ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಬಾರ್ ಚೈಲ್ಡ್ ವೆಲ್‌'ಕೇರ್ ಈ ಪ್ರಶಸ್ತಿ ಪ್ರಕಟಿಸಿದ್ದು ಜ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Sourya Award to Bagalkote girl Netravathi

ಬಾಗಲಕೋಟೆ (ಜ.19): ಹುನಗುಂದ ತಾಲೂಕಿನ ಹೊಸೂರಿನ ನೇತ್ರಾವತಿ ಎಂ.ಚವಾಣ್ ಗೆ ಮರಣೋತ್ತರವಾಗಿ ಗೀತಾ ಚೋಪ್ರಾ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಬಾರ್ ಚೈಲ್ಡ್ ವೆಲ್‌'ಕೇರ್ ಈ ಪ್ರಶಸ್ತಿ ಪ್ರಕಟಿಸಿದ್ದು ಜ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ದೇಶದ ವಿವಿ ರಾಜ್ಯಗಳ ಒಟ್ಟು 18 ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ. 2017 ರ ಮೇ 13 ರಂದು ಕಲ್ಲಿನ ಕ್ವಾರಿಯ ಸಮೀಪದಲ್ಲಿದ್ದ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಮುತ್ತು ಮತ್ತು ಗಣೇಶ್ ಎಂಬ ಇಬ್ಬರು ಬಾಲಕರು ನೀರಿನಲ್ಲಿ ಮುಳುಗುತ್ತಿದ್ದರು. ತಕ್ಷಣವೇ ಅವರ ರಕ್ಷಣೆಗೆ ಧಾವಿಸಿದ ನೇತ್ರಾವತಿ ಮುತ್ತು ಅನ್ನು ದಡಕ್ಕೆ ಎಳೆದುಕೊಂಡು ಬರಲು ಸಫಲರಾದರು. ಆ ಬಳಿಕ ಗಣೇಶ್‌'ನ ರಕ್ಷಣೆಗೆ ನೇತ್ರಾವತಿ ಧಾವಿಸಿದಳು. ಆದರೆ ಗಣೇಶ್‌'ನ ರಕ್ಷಣೆ ವೇಳೆ ಇಬ್ಬರು ಕೂಡ ಪ್ರಾಣ ತೆತ್ತರು.  

 

Follow Us:
Download App:
  • android
  • ios