ಶೀಘ್ರದಲ್ಲೇ ರಾಜ್ಯದ ಜನತೆಗೆ 'ಕರೆಂಟ್' ಶಾಕಿಂಗ್ ನ್ಯೂಸ್!
ದರ ಏರಿಕೆ ಮಾಡುವ ಸಂಬಂಧ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕೂಡಾ ಸಲ್ಲಿಕೆಯಾಗಿದೆ.
ಬೆಂಗಳೂರು(ಫೆ.20): ಬೇಸಿಗೆಯ ಬಿಸಿ ಏರುತ್ತಿರುವುದರ ಜೊತೆಯಲ್ಲಿಯೇ ರಾಜ್ಯದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್ ಕಾದಿದೆ. ಮಾರ್ಚ್ ನಿಂದ ವಿದ್ಯುತ್ ಬಿಲ್ ಏರಿಕೆಯಾಗುವ ಸಾಧ್ಯತೆಗಳಿವೆ. ದರ ಏರಿಕೆ ಮಾಡುವ ಸಂಬಂಧ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕೂಡಾ ಸಲ್ಲಿಕೆಯಾಗಿದೆ. ಪ್ರತಿ ಯುನಿಟ್ಗೆ 1. 48 ಪೈಸೆ ಏರಿಕೆ ಮಾಡುವ ಬಗ್ಗೆ ಕೆಇಆರ್ಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಇಂದು ಕೆಇಆರ್ಸಿ ಅಧ್ತಕ್ಷ ಶಂಕರಲಿಂಗೇಗೌಡ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕೆಇಆರ್ಸಿ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮುಂದಿನ ತಿಂಗಳಿನಿಂದ ದರ ಏರಿಕೆಯಾಗಲಿದೆ.