ಪಾಕಿಸ್ತಾನ ಉಗ್ರ ಹಫೀಜ್​​ ಸಯೀದ್​​ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆಬೀದರ್​​​ನ ಕರ್ನಾಟಕ ಟೈಗರ್ಸ್​​​ ಹೋರಾಟ ಸಮಿತಿ ರಾಜ್ಯಾಧ್ಯಕ್ಷನ ಪುತ್ರನಿಗೆ ಸಂಕಷ್ಟಹಫೀಜ್ ಮಹ್ಮದ್ ಸಯೀದ್ ವಿರುದ್ಧ  ಮಾತನಾಡಿರುವ ವಿಡಿಯೋ ವೈರಲ್​ದುಬೈನಲ್ಲಿ ಕೆಲಸ ಮಾಡುತ್ತಿರುವ ಅಲಿಖಾನ್​​ ಪುತ್ರನಿಗೆ ಜೀವ ಬೆದರಿಕೆ

ಬೀದರ್ (ಅ.07): ಪಾಕಿಸ್ತಾನ ಉಗ್ರ ಹಫೀಜ್​​ ಮಹಮ್ಮದ ಸಯೀದ್​​​​ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಬೀದರ್​​​ನ ಕರ್ನಾಟಕ ಟೈಗರ್ಸ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಲಿ ಖಾನ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಜೆಯುಡಿ ಮುಖ್ಯಸ್ಥ ಹಫೀಜ್ ಮಹ್ಮದ್ ಸಯೀದ್ ವಿರುದ್ಧ ಮಾತನಾಡಿದ್ದ ವಿಡಿಯೋ ವೈರಲ್​ ಆಗಿದೆ.

ಇದಕ್ಕೆ ಪ್ರತೀಕಾರವೆಂಬಂತೆ ದುಬೈನಲ್ಲಿ ಕೆಲಸ ಮಾಡುವ ಅಲಿಖಾನ್​​ ಪುತ್ರ ಅಮೀರ್​​​ ಖಾನ್​​ ಜೀವಕ್ಕೆ ಕುತ್ತು ಬಂದಿದೆ.

ಬೀದರ್​​​​ನ ಬದ್ರುದ್ದಿನ್ ಕಾಲೋನಿ ನಿವಾಸಿ ಅಲಿಖಾನ್ ಅವರು ಹಲವಾರು ಜನಪರ ಹೋರಾಟ ನಡೆಸಿಕೊಂಡು ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ.

ದೇಶದ ಬಗ್ಗೆ ಹಫೀಜ್​ ಸಯೀದ್​​ ಪ್ರಚೋದನಾತ್ಮಕ ಹೇಳಿಕ್ಕೆ ನೀಡಿದ್ದಕ್ಕೆ ಆಕ್ರೋಶಗೊಂಡು, ಅಲಿಖಾನ್ ಹಫೀಜ್ ಹಾಗೂ ಪಾಕಿಸ್ತಾನ ವಿರುದ್ಧ ಮಾತನಾಡಿದ್ದಾರೆ. ಅಲಿಖಾನ್ ಮಗ ಆಮಿರ ಖಾನ್ ದುಬೈಲ್ ನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದು, ತಂದೆ ಹೇಳಿಕೆಯನ್ನು ದುಬೈನಲ್ಲಿ ನೆಲೆಸಿರುವ ಪಾಕಿಸ್ತಾನ ವಲಸಿಗರು ನೋಡಿದ್ದಾರೆ.

ನಿಮ್ಮ ತಂದೆ ಹಫೀಜ್​ ವಿರುದ್ಧ ಮಾತಾಡಿದ್ದಾರೆ, ನೀನು ಸಾಯಬೇಕಾಗುತ್ತೆ ಅಂತ ಎಚ್ಚರಿಕೆ ಇರುವ ಆಡಿಯೋ ಕ್ಲೀಪ್​​ ಅನ್ನು ಅಮೀರ್​​ಗೆ ಪಾಕಿಸ್ತಾನಿ ಉಗ್ರ ಸಂಘಟನೆ ಕಳುಹಿಸಿದೆ.

ಮಗನ ಬೆದರಿಕೆಯಿಂದ ಆತಂಕಗೊಂಡಿರುವ ಅಲಿಖಾನ್​​, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಇದಷ್ಟೆ ಅಲ್ಲ ಅಲಿಖಾನ್ ಅವರಿಗೂ ಕೂಡ ದೂರವಾಣಿ ಮೂಲಕ ಜೀವ ಬೇದರಿಕೆ ಒಡ್ಡಿದ್ದಾರೆಂದು ಹೇಳಲಾಗಿದೆ.