ಪಾಕಿಸ್ತಾನ ಉಗ್ರ ಹಫೀಜ್ ಸಯೀದ್ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆಬೀದರ್ನ ಕರ್ನಾಟಕ ಟೈಗರ್ಸ್ ಹೋರಾಟ ಸಮಿತಿ ರಾಜ್ಯಾಧ್ಯಕ್ಷನ ಪುತ್ರನಿಗೆ ಸಂಕಷ್ಟಹಫೀಜ್ ಮಹ್ಮದ್ ಸಯೀದ್ ವಿರುದ್ಧ ಮಾತನಾಡಿರುವ ವಿಡಿಯೋ ವೈರಲ್ದುಬೈನಲ್ಲಿ ಕೆಲಸ ಮಾಡುತ್ತಿರುವ ಅಲಿಖಾನ್ ಪುತ್ರನಿಗೆ ಜೀವ ಬೆದರಿಕೆ
ಬೀದರ್ (ಅ.07): ಪಾಕಿಸ್ತಾನ ಉಗ್ರ ಹಫೀಜ್ ಮಹಮ್ಮದ ಸಯೀದ್ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಬೀದರ್ನ ಕರ್ನಾಟಕ ಟೈಗರ್ಸ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಲಿ ಖಾನ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಜೆಯುಡಿ ಮುಖ್ಯಸ್ಥ ಹಫೀಜ್ ಮಹ್ಮದ್ ಸಯೀದ್ ವಿರುದ್ಧ ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ.
ಇದಕ್ಕೆ ಪ್ರತೀಕಾರವೆಂಬಂತೆ ದುಬೈನಲ್ಲಿ ಕೆಲಸ ಮಾಡುವ ಅಲಿಖಾನ್ ಪುತ್ರ ಅಮೀರ್ ಖಾನ್ ಜೀವಕ್ಕೆ ಕುತ್ತು ಬಂದಿದೆ.
ಬೀದರ್ನ ಬದ್ರುದ್ದಿನ್ ಕಾಲೋನಿ ನಿವಾಸಿ ಅಲಿಖಾನ್ ಅವರು ಹಲವಾರು ಜನಪರ ಹೋರಾಟ ನಡೆಸಿಕೊಂಡು ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ.
ದೇಶದ ಬಗ್ಗೆ ಹಫೀಜ್ ಸಯೀದ್ ಪ್ರಚೋದನಾತ್ಮಕ ಹೇಳಿಕ್ಕೆ ನೀಡಿದ್ದಕ್ಕೆ ಆಕ್ರೋಶಗೊಂಡು, ಅಲಿಖಾನ್ ಹಫೀಜ್ ಹಾಗೂ ಪಾಕಿಸ್ತಾನ ವಿರುದ್ಧ ಮಾತನಾಡಿದ್ದಾರೆ. ಅಲಿಖಾನ್ ಮಗ ಆಮಿರ ಖಾನ್ ದುಬೈಲ್ ನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದು, ತಂದೆ ಹೇಳಿಕೆಯನ್ನು ದುಬೈನಲ್ಲಿ ನೆಲೆಸಿರುವ ಪಾಕಿಸ್ತಾನ ವಲಸಿಗರು ನೋಡಿದ್ದಾರೆ.
ನಿಮ್ಮ ತಂದೆ ಹಫೀಜ್ ವಿರುದ್ಧ ಮಾತಾಡಿದ್ದಾರೆ, ನೀನು ಸಾಯಬೇಕಾಗುತ್ತೆ ಅಂತ ಎಚ್ಚರಿಕೆ ಇರುವ ಆಡಿಯೋ ಕ್ಲೀಪ್ ಅನ್ನು ಅಮೀರ್ಗೆ ಪಾಕಿಸ್ತಾನಿ ಉಗ್ರ ಸಂಘಟನೆ ಕಳುಹಿಸಿದೆ.
ಮಗನ ಬೆದರಿಕೆಯಿಂದ ಆತಂಕಗೊಂಡಿರುವ ಅಲಿಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಇದಷ್ಟೆ ಅಲ್ಲ ಅಲಿಖಾನ್ ಅವರಿಗೂ ಕೂಡ ದೂರವಾಣಿ ಮೂಲಕ ಜೀವ ಬೇದರಿಕೆ ಒಡ್ಡಿದ್ದಾರೆಂದು ಹೇಳಲಾಗಿದೆ.
