Asianet Suvarna News Asianet Suvarna News

ಕರ್ನಾಟಕದ ಗಡಿಯಲ್ಲಿ ಆಂಧ್ರ ಸಂಸದನ ಪುತ್ರ ಗೂಂಡಾಗಿರಿ

ಟೋಲ್​ ಹಣ ಕೇಳಿದ್ದಕ್ಕೆ ಟೋಲ್​ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್​​, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.

son of andhra mp nimmala krishnappa rowdyism at toll booth in bagepalli

ಕೋಲಾರ(ಏ. 24): ಬಾಗೇಪಲ್ಲಿ ಟೋಲ್ ಬಳಿ ಆಂಧ್ರ ಸಂಸದನೊಬ್ಬನ ಪುತ್ರ ಗೂಂಡಾಗಿರಿ ನಡೆಸಿ ಟೋಲ್ ಚಿಂದಿ ಮಾಡಿದ್ದಾನೆ.  ಟೋಲ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಗಾಜುಗಳನ್ನ ಪುಡಿಪುಡಿಮಾಡಿದ್ದಾನೆ. ದಾಂಧಲೆ ನಡೆಸಿದ್ದು, ಆಂಧ್ರಪ್ರದೇಶದ ಹಿಂದೂಪುರ ಟಿಡಿಪಿ ಸಂಸದ ನಿಮ್ಮಲ ಕೃಷ್ಣಪ್ಪ ಪುತ್ರ ಅಂಬರೀಷ್​​ ಮತ್ತು ಸ್ನೇಹಿತರು.

ಟೋಲ್​ ಹಣ ಕೇಳಿದ್ದಕ್ಕೆ ಟೋಲ್​ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್​​, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಟೋಲ್​ ಗೇಟ್​ ನಲ್ಲೇ ಕಾರು ನುಗ್ಗಿಸಿಕೊಂಡು ಅಂಬರೀಷ್ ತೆರಳಿದ್ದಾನೆ.

ಆಂಧ್ರ ಎಂಪಿ ಮಗನ ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಗೇಪಲ್ಲಿ ಪೊಲೀಸರು ಆರೋಪಿ ಅಂಬರೀಷ್'ನನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios