ಕರ್ನಾಟಕದ ಗಡಿಯಲ್ಲಿ ಆಂಧ್ರ ಸಂಸದನ ಪುತ್ರ ಗೂಂಡಾಗಿರಿ
ಟೋಲ್ ಹಣ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.
ಕೋಲಾರ(ಏ. 24): ಬಾಗೇಪಲ್ಲಿ ಟೋಲ್ ಬಳಿ ಆಂಧ್ರ ಸಂಸದನೊಬ್ಬನ ಪುತ್ರ ಗೂಂಡಾಗಿರಿ ನಡೆಸಿ ಟೋಲ್ ಚಿಂದಿ ಮಾಡಿದ್ದಾನೆ. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಗಾಜುಗಳನ್ನ ಪುಡಿಪುಡಿಮಾಡಿದ್ದಾನೆ. ದಾಂಧಲೆ ನಡೆಸಿದ್ದು, ಆಂಧ್ರಪ್ರದೇಶದ ಹಿಂದೂಪುರ ಟಿಡಿಪಿ ಸಂಸದ ನಿಮ್ಮಲ ಕೃಷ್ಣಪ್ಪ ಪುತ್ರ ಅಂಬರೀಷ್ ಮತ್ತು ಸ್ನೇಹಿತರು.
ಟೋಲ್ ಹಣ ಕೇಳಿದ್ದಕ್ಕೆ ಟೋಲ್ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಟೋಲ್ ಗೇಟ್ ನಲ್ಲೇ ಕಾರು ನುಗ್ಗಿಸಿಕೊಂಡು ಅಂಬರೀಷ್ ತೆರಳಿದ್ದಾನೆ.
ಆಂಧ್ರ ಎಂಪಿ ಮಗನ ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಗೇಪಲ್ಲಿ ಪೊಲೀಸರು ಆರೋಪಿ ಅಂಬರೀಷ್'ನನ್ನು ಬಂಧಿಸಿದ್ದಾರೆ.