ಕಣ್ಣೂರು(ಅ.2) : ಐಸಿಸ್​ ಮಾದರಿಯಲ್ಲಿ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಸಂಚು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳು ಕೇರಳದ ಕಣ್ಣೂರಿನಲ್ಲಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಒಮರ್​ ಅಲಿಯಾಸ್​ ಮನ್ಸೀದ್​​(30), ಅಬು ಬಸೀರ್​(29),ಮಹಮದ್​ ಅಲಿಯಾಸ್​ ಯೂಸುಫ್​(26), ಸಫ್ವನ್​(30), ಜಸಿಮ್ ಎನ್​.ಕೆ ​(25), ರಮ್ಶಾದ್​ @ ಅಮ್ಮು(24) ಬಂಧಿತರು. ಇವರು ಕಣ್ಣೂರು ಜಿಲ್ಲೆಯ ಕನಕಮಾಲಾ ಬೆಟ್ಟದಲ್ಲಿ ರಹಸ್ಯ ಸಭೆ ನಡೆಸಿದ್ದರು. ಪ್ರಮುಖ ವ್ಯಕ್ತಿಗಳು, ಪ್ರಸಿದ್ಧ ಸ್ಥಳಗಳು ಇವರ ಟಾರ್ಗೆಟ್​ ಆಗಿತ್ತು ಎನ್ನಲಾಗಿದೆ. ಬಂಧಿತರಿಂದ ಎಲೆಕ್ಟ್ರಾನಿಕ್ಸ್​​ ವಸ್ತುಗಳು, ಸ್ಫೋಟಕ ಸಾಮಗ್ರಿ ವಶ ಪಡಸಿಸಿಕೊಳ್ಳಲಾಗಿದೆ.