ಕಣ್ಣೂರು(ಅ.2) : ಐಸಿಸ್ ಮಾದರಿಯಲ್ಲಿ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಸಂಚು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕೇರಳದ ಕಣ್ಣೂರಿನಲ್ಲಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಒಮರ್ ಅಲಿಯಾಸ್ ಮನ್ಸೀದ್(30), ಅಬು ಬಸೀರ್(29),ಮಹಮದ್ ಅಲಿಯಾಸ್ ಯೂಸುಫ್(26), ಸಫ್ವನ್(30), ಜಸಿಮ್ ಎನ್.ಕೆ (25), ರಮ್ಶಾದ್ @ ಅಮ್ಮು(24) ಬಂಧಿತರು. ಇವರು ಕಣ್ಣೂರು ಜಿಲ್ಲೆಯ ಕನಕಮಾಲಾ ಬೆಟ್ಟದಲ್ಲಿ ರಹಸ್ಯ ಸಭೆ ನಡೆಸಿದ್ದರು. ಪ್ರಮುಖ ವ್ಯಕ್ತಿಗಳು, ಪ್ರಸಿದ್ಧ ಸ್ಥಳಗಳು ಇವರ ಟಾರ್ಗೆಟ್ ಆಗಿತ್ತು ಎನ್ನಲಾಗಿದೆ. ಬಂಧಿತರಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಫೋಟಕ ಸಾಮಗ್ರಿ ವಶ ಪಡಸಿಸಿಕೊಳ್ಳಲಾಗಿದೆ.
ಐಸಿಸ್ ಮಾದರಿಯಲ್ಲಿ ಉಗ್ರ ಕೃತ್ಯಕ್ಕೆ ಸಂಚು : ಎನ್ಐಎ'ನಿಂದ 6 ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
