ಬಾರಾಮುಲ್ಲಾದ ರಾಮ್’ಪುರ ಸೆಕ್ಟರ್’ನಲ್ಲಿ  ಉಗ್ರರನ್ನು ಎನ್’ಕೌಂಟರ್ ಮಾಡಲಾಗಿದೆ. ಎನ್’ಕೌಂಟರ್​ನಲ್ಲಿ ಹಿಜ್ಬುಲ್​ ಸಂಘಟನೆ ಕಮಾಂಡರ್ ಸಬ್ಜರ್​ ಕೂಡ ಸಾವನ್ನಪ್ಪಿರುವುದು ತಿಳಿದುಬಂದಿದೆ.

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸೈನಿಕರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಗಡಿಯಲ್ಲಿ ನುಸುಳಲು ಯತ್ನಿಸಿದ 6 ಜನ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಬಾರಾಮುಲ್ಲಾದ ರಾಮ್’ಪುರ ಸೆಕ್ಟರ್’ನಲ್ಲಿ ಉಗ್ರರನ್ನು ಎನ್’ಕೌಂಟರ್ ಮಾಡಲಾಗಿದೆ. ಎನ್’ಕೌಂಟರ್​ನಲ್ಲಿ ಹಿಜ್ಬುಲ್​ ಸಂಘಟನೆ ಕಮಾಂಡರ್ ಸಬ್ಜರ್​ ಕೂಡ ಸಾವನ್ನಪ್ಪಿರುವುದು ತಿಳಿದುಬಂದಿದೆ.

ರಾಮ್’ಪುರ ಸೆಕ್ಟರ್’ನಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅವಿತಿರುವ ಸಾಧ್ಯತೆ ಇದ್ದು, ಉಗ್ರರನ್ನು ಸೇನೆ ಸುತ್ತುವರೆದಿದೆ. ಕಾರ್ಯಾಚರಣೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

(ಸಾಂದರ್ಭಿಕ ಚಿತ್ರ)