Asianet Suvarna News Asianet Suvarna News

ಮೈಸೂರಿನಲ್ಲಿ ಒಮ್ಮೆಯೂ ಜೆಡಿಎಸ್ ಗೆದ್ದಿಲ್ಲ, ಸಿದ್ದರಾಮಯ್ಯ ಮಾತಿನ ಹಿಂದಿನ ಮರ್ಮವೇನು?

ಮೈಸೂರು ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಸಚಿವ ಜಿ.ಟಿ.ದೇವೇಗೌಡ ಮಾತಿಗೆ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

Siddaramaiah taunts JDS over nikhil kumaraswamy Name For Mysuru Loksabha constituency
Author
Bengaluru, First Published Mar 2, 2019, 9:43 AM IST

ಮೈಸೂರು,[ಮಾ.2]: ಮೈಸೂರು-ಕೊಡಗು ಕ್ಷೇತ್ರವನ್ನ ಒಮ್ಮೆಯೂ ಜೆಡಿಎಸ್ ಗೆದ್ದಿಲ್ಲ, ನಾನು ಜೆಡಿಎಸ್​​ನಲ್ಲಿ ಇದ್ದಾಗಲೂ ಗೆದ್ದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ‌ಅವರು ಪರೋಕ್ಷವಾಗಿ ಜೆಡಿಎಸ್ ಕಾಲೆಳೆದಿದ್ದಾರೆ. 

ಮೈಸೂರು ಟಿಕೇಟ್ ಅನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡಬೇಕೆಂದು ನಿನ್ನೆ [ಶುಕ್ರವಾರ] ಬಹಿರಂಗ ಸಭೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ಪ್ರಸ್ತಾಪಿಸಿದರು. ಅಂದ್ರೆ ಮೈಸೂರು ಕ್ಷೇತ್ರವನ್ನು ಜೆಡಿಎಸ್ ಗೆ ನೀಡಬೇಕೆನ್ನುವ ಅರ್ಥದಲ್ಲಿ ಹೇಳಿದ್ದರು. 

ಲೋಕಸಭಾ ಎಲೆಕ್ಷನ್: ಪ್ರತಾಪ್ ಸಿಂಹ ವಿರುದ್ಧ JDSನಿಂದ ನಿಖಿಲ್ ಹೆಸ್ರು ಪ್ರಸ್ತಾಪ

ಇನ್ನು ಈ ಬಗ್ಗೆ ಮೈಸೂರಿನ‌ಲ್ಲಿ ಕಾಂಗ್ರೆಸ್​  ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಅಭ್ಯರ್ಥಿ ಯಾರೆಂಬುವುದನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. 

ಈ ಕ್ಷೇತ್ರದಲ್ಲಿ 16 ಬಾರಿ ಚುನಾವಣೆ ನಡೆದಿದ್ದು, 13 ಬಾರಿ ಕಾಂಗ್ರೆಸ್, 3 ಮೂರಿ ಬಾರಿ ಬಿಜೆಪಿ ಗೆದ್ದಿದ್ದೆ. ಈ ಭಾಗದ ಸಂಸದ ಪ್ರತಾಪ್ ಸಿಂಹ ಮಾಹಾ ಸುಳ್ಳುಗಾರ. ಆತ, ಪ್ರಧಾನಿ ನರೇಂದ್ರ ಮೋದಿಗಿಂತಲೂ ಹೆಚ್ಚು ಸುಳ್ಳು ಹೇಳ್ತಾನೆ. ಹೀಗಾಗಿ ಪ್ರತಾಪ್ ಸಿಂಹನನ್ನು ಈ ಬಾರಿ ಸೋಲಿಸಬೇಕು ಎಂದು ಹೇಳಿದರು.

ಕೆಲವರು ನನ್ನನ್ನು ಸಂಸತ್​ ಚುನಾವಣೆಗೆ  ಸ್ಪರ್ಧೆ ಮಾಡಿ ಅಂತಿದ್ದಾರೆ. ಆದ್ರೆ ನಾನು ಇನ್ನು ಮುಂದೆ ಎಂ ಎಲ್ಎಗೂ ನಿಲ್ಲೋಲ್ಲ, ಎಂಪಿಗೂ ನಿಲ್ಲೋಲ್ಲ. ಚಾಮುಂಡೇಶ್ವರಿಯಲ್ಲೂ ನಿಲ್ಲೋಲ್ಲ, ಬದಾಮಿಯಲ್ಲೂ ಸ್ಪರ್ಧೆ ಮಾಡೋಲ್ಲ. ಆದ್ರೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿರ್ತಿನಿ. ರಾಜಕೀಯ ಬಿಟ್ಟು ನಾನು ಓಡಿ ಹೋಗುವುದಿಲ್ಲ ಎಂದರು.

Follow Us:
Download App:
  • android
  • ios