ನಿನ್ನೆ ನಡೆದ ಬಿಜೆಪಿ ಕೋರ್​ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಇದೇ 8 ಅಂದರೆ ಮುಂದಿನ ಮಂಗಳವಾರ ನಂಜನಗೂಡು ಮಾಜಿ ಶಾಸಕ ಶ್ರೀನಿವಾಸ ಪ್ರಸಾದ್ ತಮ್ಮ ಬೆಂಬಲಿಗರ ಜತೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಕಾದು ನಂತರ ಅಧಿಕೃತವಾಗಿ ಮುಂದುವರಿಯಲು ನಾಯಕರು ತೀರ್ಮಾನಿಸಲಾಗಿದೆ.

ಬೆಂಗಳೂರು(ಅ.02): ಕಾಂಗ್ರೆಸ್​ನಿಂದ ಹೊರಬಿದ್ದು ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಸೇರ್ಪಡೆಯ ದಿನಾಂಕ ಕೂಡ ನಿಗದಿಯಾಗಿದೆ.

ನಿನ್ನೆ ನಡೆದ ಬಿಜೆಪಿ ಕೋರ್​ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಇದೇ 8 ಅಂದರೆ ಮುಂದಿನ ಮಂಗಳವಾರ ನಂಜನಗೂಡು ಮಾಜಿ ಶಾಸಕ ಶ್ರೀನಿವಾಸ ಪ್ರಸಾದ್ ತಮ್ಮ ಬೆಂಬಲಿಗರ ಜತೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಕಾದು ನಂತರ ಅಧಿಕೃತವಾಗಿ ಮುಂದುವರಿಯಲು ನಾಯಕರು ತೀರ್ಮಾನಿಸಲಾಗಿದೆ.

ಒಂದು ವೇಳೆ ಕಮಲವನ್ನು ಮುಡಿದಿದ್ದೇ ಆದರೆ ಬೈ ಎಲೆಕ್ಷನ್​ಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಪಕ್ಷವೇ ಹೊತ್ತುಕೊಂಡಿದೆ ಎಂದೂ ಹೇಳಿಲಾಗುತ್ತಿದೆ.