ಬೆಂಗಳೂರು(ಸೆ.19): ಉದ್ಯಮಿ ಮುಖೇಶ್​​ ಅಂಬಾನಿ ಪುತ್ರ ಅನಂತ್​ ಅಂಬಾನಿ 18 ತಿಂಗಳಲ್ಲಿ 108 ಕೆಜಿ ಕರಗಿಸಿದ ಕಥೆ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಆದರೆ, ಈ ಕಥೆ ಅದಕ್ಕೆ ತದ್ವಿರುದ್ಧ. ಯಾಕೆಂದರೆ, ತೂಕ ಇಳಿಸಲು ಹೋಗಿ ಯುವಕನೊಬ್ಬ ಪ್ರಾಣಬಿಟ್ಟ ಧಾರುಣ ಘಟನೆ ಬೆಂಗಳೂರಿನ ನೆಲಮಂಗಲ ಬಳಿ ನಡೆದಿದೆ. ಮೃತನನ್ನು ಗಂಗರಾಜು ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

ಗಂಗರಾಜು ದೇಹದ ತೂಕ ಇಳಿಸಲು ಫ್ಯಾಟ್ ಕಟರ್ ಪೌಡರ್ ಕುಡಿಯುತ್ತಿದ್ದ ಅಂತ ಹೇಳಲಾಗಿದೆ. ಆತ ಸೇವಿಸುತ್ತಿದ್ದ ಪೌಡರ್ ಈತನ ಜೀವಕ್ಕೆ ಮುಳುವಾಗಿದೆ ಅಂತ ಅಲ್ಲಿನ ಜನರು ಹೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ಫ್ಯಾಟ್​​ ಪೌಡರ್ ಕುಡಿಯುತ್ತಿದ್ದ, ಆದರೆ, ಮೂರು ದಿನದ ಹಿಂದೆ ಸೈಡ್ ಎಫೆಕ್ಟ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಗಂರಾಜು ಮೃತಪಟ್ಟಿದ್ದಾನೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.