ತಮಿಳುನಾಡು ದೇಗುಲವೊಂದರಲ್ಲಿ ದೇಗುಲದ ಹುಂಡಿ ಹಣ ಹಂಚುವ ವೇಳೆ ಕಾಲ್ತುಳಿತದಿಂದಾಗಿ 7 ಭಕ್ತಾಧಿಗಳು ದುರ್ಮರಣ ಹೊಂದಿದ್ದಾರೆ

ತಿರುಚನಾಪಳ್ಳಿ[ಏ.22]: ರ್ಮಿಕ ಪೂಜಾ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿಗೆ ಸಿಲುಕಿ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಭಕ್ತರು ಸಾವನ್ನಪ್ಪಿದ ಘಟನೆ ಭಾನುವಾರ ತಿರುಚನಾಪಳ್ಳಿ ಜಿಲ್ಲೆಯ ತುರೈಯೂರಿನಲ್ಲಿ ಜರುಗಿದೆ.

Add Asianetnews Kannada as a Preferred SourcegooglePreferred

ಚೈತ್ರ (ಚಿತ್ರ) ಪೂರ್ಣಿಮೆ ಅಂಗವಾಗಿ ತುರೈಯೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಹುಂಡಿಗೆ ಬಂದ ಹಣದಲ್ಲಿನ ನಾಣ್ಯಗಳನ್ನು (ಪದಿ ಕಾಸು) ದೇವಸ್ಥಾನದ ಅರ್ಚಕರು ಭಕ್ತರಿಗೆ ಹಂಚುವ ಸಂಪ್ರದಾಯವಿದೆ. ಇದನ್ನು ಮನೆಯಲ್ಲಿಟ್ಟರೆ ಐಶ್ವರ್ಯ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಾಣ್ಯಗಳನ್ನು ಪಡೆಯಲು ಭಕ್ತರು ಒಂದೇ ಬಾರಿಗೆ ಮುಗಿಬಿದ್ದು ನೂಕಾಟ ನಡೆದು ಏಳು ಜನರ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿತರ ಗಾಯಾಳುಗಳನ್ನು ತುರೈಯೂರು ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರ್ಘಟನೆ ಕುರಿತು ತನಿಖೆ ಆರಂಭಗೊಂಡಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28