ವಕ್ಫ್ ಸದಸ್ಯರ ವಜಾ: ಯೋಗಿಗೆ ಕೋರ್ಟ್'ನಲ್ಲಿ ಹಿನ್ನಡೆ
ಉತ್ತರ ಪ್ರದೇಶ ಸರ್ಕಾರ ವಜಾಗೊಳಿ ಸಿದ್ದ ಶಿಯಾ ವಕ್ಫ್ ಮಂಡಳಿಯ 6 ಸದಸ್ಯರನ್ನು ಮರುನೇಮಕ ಮಾಡಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಲಖನೌ: ಉತ್ತರ ಪ್ರದೇಶ ಸರ್ಕಾರ ವಜಾಗೊಳಿ ಸಿದ್ದ ಶಿಯಾ ವಕ್ಫ್ ಮಂಡಳಿಯ 6 ಸದಸ್ಯರನ್ನು ಮರುನೇಮಕ ಮಾಡಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ವಕ್ಫ್ ಕಾಯ್ದೆಯನ್ವಯ ಪ್ರತಿವಾದಿಗಳ ವಾದವನ್ನು ಆಲಿಸುವುದೂ ಕಡ್ಡಾ ಯವಾಗಿದೆ. ಅದಕ್ಕೆ ಅವಕಾಶ ನೀಡಿರಲಿಲ್ಲವಾಗಿದ್ದುದರಿಂದ ಅಲಹಾಬಾದ್ ಹೈಕೋರ್ಟ್ ಯುಪಿ ಸರ್ಕಾರದ ವಜಾ ಆದೇಶಕ್ಕೆ ತಡೆ ನೀಡಿದೆ.
ಆದರೆ ಕಾನೂನಿನ ಪ್ರಕಾರ ಹೊಸದಾಗಿ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ಕೋರ್ಟ್ ಸ್ವಾತಂತ್ರ್ಯ ನೀಡಿದೆ. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಅಸಮರ್ಪಕತೆಯ ಆಪಾದನೆಯ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ, 6 ಸದಸ್ಯರನ್ನು ವಜಾ ಮಾಡಿತ್ತು.