ಪಾರ್ಸಿ ಸಮುದಾಯದಲ್ಲಿರುವ ವಿಚ್ಛೇದನ ಪದ್ಧತಿ ಬಗ್ಗೆ ಸುಪ್ರೀಂ  ದೃಷ್ಟಿ ಹರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳ ಸಲಹೆ ಕೋರಿದೆ.

ನವದೆಹಲಿ(ನ.25): ಹಠಾತ್ ವಿಚ್ಛೇದನ ನೀಡಲು ಮುಸಲ್ಮಾನರು ಬಳಸುತ್ತಿದ್ದ ತ್ರಿವಳಿ ತಲಾಖ್ (ತಲಾಖ್ ಎ ಬಿದ್ದತ್)ಗೆ ನಿಷೇಧ ಹೇರಿದ ಸುಪ್ರೀಂಕೋರ್ಟ್ ಇದೀಗ ಪಾರ್ಸಿ ಸಮುದಾಯದಲ್ಲಿರುವ ವಿಚ್ಛೇದನ ಪದ್ಧತಿ ಬಗ್ಗೆ ದೃಷ್ಟಿ ಹರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳ ಸಲಹೆ ಕೋರಿದೆ. ಕೆಲವು ಸದಸ್ಯರನ್ನು ಒಳಗೊಂಡ ನ್ಯಾಯ ಮಂಡಳಿ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವವ್ಯವಸ್ಥೆ 1959ರಲ್ಲೇ ಭಾರತದಲ್ಲಿ ರದ್ದಾಗಿದೆ.

Add Asianetnews Kannada as a Preferred SourcegooglePreferred

ಆದರೆ ದೇಶದ ಪ್ರಭಾವಿ ಪಾರ್ಸಿ ಸಮುದಾಯದಲ್ಲಿ ಈಗಲೂ ಪಂಚ ಸದಸ್ಯ ನ್ಯಾಯಮಂಡಳಿ ಮೂಲಕ ವಿಚ್ಛೇದನಗಳು ಪ್ರಕರಣಗಳು ವಿಚಾರಣೆ ನಡೆಯುತ್ತಿವೆ. ಈ ವಿಚಾರ ತಿಳಿದು ನ್ಯಾ| ಕುರಿಯನ್ ಜೋಸೆಫ್ ನೇತೃತ್ವದ ಪೀಠ ಅಚ್ಚರಿ ವ್ಯಕ್ತಪಡಿಸಿತು. ಇದಕ್ಕೆ ಅರ್ಜಿದಾರೆ, ತ್ರಿವಳಿ ತಲಾಖ್ ಅನ್ನೇ ಸುಪ್ರೀಂ ಸಂವಿಧಾನ ಬಾಹಿರ ಎಂದಿದೆ. ಹೀಗಾಗಿ ಈ ಕಾನೂನನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೋರಿದರು. ನ್ಯಾಯಪೀಠ ಒಪ್ಪಿಗೆ ಸೂಚಿಸಿತು.