Asianet Suvarna News Asianet Suvarna News

ನಟ ನಿನಾಸಂ ಸತೀಶ್ ಮತ್ತೊಂದು ಹೊಸ ಹೆಜ್ಜೆ

ಹಳ್ಳಿಯ ಸಮಸ್ಯೆ ಬಗೆಹರಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ಚಿಂತಿಸಿರುವ ನಟ ನಿನಾಸಂ ಸತೀಶ್ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿಯನ್ನು ದತ್ತು ಪಡೆದಿದ್ದಾರೆ.  

Sathish Ninasam adopted the village

ಮಂಡ್ಯ : ಹಳ್ಳಿಯ ಸಮಸ್ಯೆ ಬಗೆಹರಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ಚಿಂತಿಸಿರುವ ನಟ ನಿನಾಸಂ ಸತೀಶ್ ಮಂಡ್ಯ ಜಿಲ್ಲೆ,ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಹಳ್ಳಿಯನ್ನು ದತ್ತು ಪಡೆದಿದ್ದಾರೆ.  .

150 ಜನರ ಟೀಮ್ ಹೊಂದಿರುವ ಸತೀಶ್ ಪಿಕ್ಚರ್ ಹೌಸ್ ಅಡಿಯಲ್ಲಿ ಗ್ರಾಮ ದತ್ತು ಪಡೆದಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಒಟ್ಟಾರೆ 400ಮನೆಗಳನ್ನ ಈ ಹಳ್ಳಿ ಹೊಂದಿದ್ದು, ಈ ಗ್ರಾಮದಲ್ಲಿ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವ ಭರವಸೆ ನೀಡಿದ್ದಾರೆ. 

ಗ್ರಾಮದ ಪ್ರಾಥಮಿಕ ಸಮಸ್ಯೆಗಳಾದ ನೀರಿನ ಸಮಸ್ಯೆ ಬಗೆಹರಿಸುವುದು,  ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಸತೀಶ್ ನಿರ್ಧಾರ ಮಾಡಿದ್ದಾರೆ.  ನಟ ಸತೀಶ್ ನೀನಾಸಂ ಸತೀಶ್ ಅವರ ಈ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios