Asianet Suvarna News Asianet Suvarna News

ಭ್ರೂಣಹತ್ಯೆ ನಡೆಸುತ್ತಿದ್ದ ಹೋಮಿಯೋಪಥಿ ವೈದ್ಯನ ಬಂಧನ

'ವೈದ್ಯೋ ನಾರಾಯಣ ಹರಿ' ಅಂತಾರೆ ಆದರೆ ಇಲ್ಲೊಬ್ಬ ಡಾಕ್ಟರ್ ಅದಕ್ಕೆ ತದ್ವಿರುದ್ಧ. ಜೀವದ ಜೊತೆ ಚೆಲ್ಲಾಟವಾಡುವ ಈ ಭೂಪ ವೈದ್ಯನನ್ನು ಕರ್ನಾಟಕ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

Sangli Doctor who conducted illegal abortions arrested in Karnataka

ಬೆಂಗಳೂರು (ಮಾ.07): 'ವೈದ್ಯೋ ನಾರಾಯಣ ಹರಿ' ಅಂತಾರೆ ಆದರೆ ಇಲ್ಲೊಬ್ಬ ಡಾಕ್ಟರ್ ಅದಕ್ಕೆ ತದ್ವಿರುದ್ಧ. ಜೀವದ ಜೊತೆ ಚೆಲ್ಲಾಟವಾಡುವ ಈ ಭೂಪ ವೈದ್ಯನನ್ನು ಕರ್ನಾಟಕ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯಲ್ಲಿ ಹೋಮಿಯೋಪತಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿರುವ ಬಾಬಾಸಾಹೇಬ್ ಕಿದ್ರಾಪುರೆ ಎಂಬುವವರು ಅಬಾರ್ಶನ್ ಮಾಡಿಸುತ್ತಿದ್ದರು. ಇವರನ್ನು ಬಂಧಿಸಲು ಮಹಾರಾಷ್ಟ್ರ ಪೊಲೀಸರಿಗೆ ಸಾಧ್ಯವಾಗದಿದ್ದಾಗ ಕರ್ನಾಟಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರ 19 ಭ್ರೂಣಗಳು ಸಾಂಗ್ಲಿಯ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಡಾ.ಕಿದ್ರಾಪುರೆ ಅಕ್ರಮವಾಗಿ ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿದ್ದು, ಬಳಿಕ ಆ ಮಹಿಳೆ ಸಾವನ್ನಪ್ಪಿದ್ದರು.

ಪೊಲೀಸರು ತನಿಖೆ ನಡೆಸುವ ವೇಳೆ ಭ್ರೂಣಗಳು ತುಂಬಿರುವ ಪ್ಲಾಸ್ಟಿಕ್ ಚೀಲಗಳು ಹಳ್ಳದಲ್ಲಿ ಪತ್ತೆಯಾಗಿವೆ. ಈ ಹಳ್ಳವು ಇವರ ಕ್ಲಿನಿಕ್ ನಿಂದ 1 ಕಿಮೀ ದೂರದಲ್ಲಿದೆ. ಇದರ ಹಿಂದೆ ದೊಡ್ಡ ದಂಧೆಯೇ ನಡೆಯುತ್ತಿದೆ ಎನ್ನುವ ಅನುಮಾನ ಹುಟ್ಟುಹಾಕಿದೆ.

Follow Us:
Download App:
  • android
  • ios