ಶಬರಿಮಲೆ ಪ್ರವೇಶಿಸಿ ತನ್ನ ಗಂಡ ಹಾಗೂ ಅತ್ತೆಯ ಕೋಪಕ್ಕೀಡಾಗಿದ್ದ ಕನಕ ದುರ್ಗಾ ಕೋರ್ಟ್ ಆದೇಶದಿಂದ ಮನೆ ಏನೋ ಸೇರಿದ್ದಾರೆ. ಆದರೀಗ ಅವರ ಅತ್ತೆ, ಮಾವ ಹಾಗೂ ಮಕ್ಕಳು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ.

ತಿರುವನಂತಪುರ[ಫೆ.07]: ಶಬರಿಮಲೆ ಪ್ರವೇಶಿದ ಕಾರಣಕ್ಕೆ ಗಂಡನ ಮನೆಯವರ ಕೋಪಕ್ಕೆ ಗುರಿಯಾಗಿದ್ದ 39 ವರ್ಷದ ಕನಕದುರ್ಗಾ ಅಂಗಡಿಪುರಂನಲ್ಲಿರುವ ತನ್ನ ಮನೆಯನ್ನು ಪ್ರವೇಶಿಸಿದ್ದಾಳೆ. ಆದರೆ, ಆಕೆಯ ಅತ್ತೆ ಸುಮತಿ ಅಮ್ಮಾ ಮತ್ತು ಪತಿ ಕೃಷ್ಣನ್‌ ಉನ್ನಿ ಮನೆಯನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯೊಂದಕ್ಕೆ ತೆರಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಬರಿಮಲೆ ಪ್ರವೇಶ: ಕನಕದುರ್ಗಾಗೆ ಮನೆ ಪ್ರವೇಶಿಸಲು ಅನುಮತಿ

ಇಷ್ಟು ದಿನ ಸರ್ಕಾರಿ ಆಶ್ರಯ ಮನೆಯೊಂದರಲ್ಲಿ ವಾಸವಿದ್ದ ಕನಕದುರ್ಗಾ ಗ್ರಾಮ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪುನಃ ಗಂಡನ ಮನೆಗೆ ಮರಳಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕೆ, ಮನೆಗೆ ಮರಳಿದ್ದು ಸಂತೋಷವಾಗಿದೆ. ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಿ ತಾನು ಮಕ್ಕಳನ್ನು ನೋಡುವ ವಿಶ್ವಾಸವಿದೆ ಎಂದು ಹೇಳಿದ್ದಾಳೆ.