ಸಿಎಂ ಪರಮಾಪ್ತ ಇಂದು ಬಿಜೆಪಿಗೆ ಸೇರ್ಪಡೆ
ಸಿಎಂ ಪರಮಾಪ್ತ ಎನಿಸಿಕೊಂಡಿದ್ದ ಎಸ್.ಆರ್.ನವಲಿಹಿರೇಮಠ ಇಂದು ಇಂದು ಬಿಜೆಪಿ ಸೇರಲಿದ್ದಾರೆ.
ಬಾಗಲಕೋಟೆ (ಮಾ. 22): ಸಿಎಂ ಪರಮಾಪ್ತ ಎನಿಸಿಕೊಂಡಿದ್ದ ಎಸ್.ಆರ್.ನವಲಿಹಿರೇಮಠ ಇಂದು ಇಂದು ಬಿಜೆಪಿ ಸೇರಲಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದ ಎಸ್.ಆರ್. ನವಲಿಹಿರೇಮಠ ಸಿಎಂಗೆ ಪರಮಾಪ್ತ ಎಂದೇ ಹೇಳಲಾಗುತ್ತಿತ್ತು. ಇಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬಿಜೆಪಿ ಸೇಪ೯ಡೆಯಾಗಲಿದ್ದಾರೆ. ನವಲಿಹಿರೇಮಠ ಬಿಜೆಪಿ ಸೇಪ೯ಡೆ ಕಾಯ೯ಕ್ರಮಕ್ಕೆ ಹುನಗುಂದದಿಂದ ಬೆಂಗಳೂರಿಗೆ 200ಕ್ಕೂ ಅಧಿಕ ಕಾಯ೯ಕತ೯ರು ಬಂದಿಳಿದಿದ್ದಾರೆ.