ಮಂತ್ರಾಲಯ ರಸ್ತೆಯಲ್ಲಿರುವ  ಔಟ್  ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ .

ರಾಯಚೂರು ಪೊಲೀಸರು  ಹಗಲು  ದರೋಡೆಗಿಳಿದಿದ್ದಾರೆ . ಹಾಡ ಹಗಲೇ  ನಡೆಯುವ ಅಕ್ರಮ  ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ  ಸೆರೆಯಾಗಿದೆ . ಮಂತ್ರಾಲಯ ರಸ್ತೆಯಲ್ಲಿರುವ  ಔಟ್  ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ . ಈ ಮಾರ್ಗದಲ್ಲಿ  ಸಂಚರಿಸೋ  ಆಟೋ  ,ಟ್ರ್ಯಾಕ್ಟರ್  ,ಲಾರಿಗಳಿಂದಿಡಿದು  ನಗರಕ್ಕೆ  ಕೃಷಿ ಉತ್ಪನ್ನಗಳ ಮಾರಾಟಕ್ಕೆ  ಬರುವ ರೈತರಿಂದ  ಪ್ರತಿ ವಾಹನಕ್ಕೆ  ಇಂತಿಷ್ಟು  ಹಣವನ್ನ   ಪೀಕುತ್ತಿದ್ದಾರೆ . ತಪಾಸಣೆ  ಹೆಸರಿನಲ್ಲಿ  ವಾಹನಗಳನ್ನ ತಡೆಯುತ್ತಾರಾದರೂ  ಯಾವುದೇ ದಾಖಲಾತಿ  ಪರಿಶೀಲಿಸುವುದು  ಇವರ ಉದ್ದೇಶವಾಗಿಲ್ಲ  .  ತಡೆದ ವಾಹನಸವಾರರು ನೇರವಾಗಿ ಹಣ ನೀಡಿ  ಹೋಗುತ್ತಿರಬೇಕು .    ಪೊಲೀಸರ ಲಂಚಬಾಕತನ  ನಿರಂತರ ನಡೆಯುತ್ತಿದ್ರೂ  ಮೇಲಾಧಿಕಾರಿಗಳು  ಮಾತ್ರ ಕಣ್ಮುಚ್ಚಿ  ಕುಳಿತಿರೋದು  ಸಾರ್ವಜನಿಕರ ಅನುಮಾನಕ್ಕೆ  ಕಾರಣವಾಗಿದೆ  .ಇನ್ನು ಇದೇ ವೇಳೆ ಪೊಲೀಸರ ಕೃತ್ಯವನ್ನ  ಸೆರೆಹಿಡಿಯಲು  ಹೋದವರ  ಮೇಲೂ  ಪೊಲೀಸರು ದರ್ಪ  ತೋರಿಸಿದ  ಪ್ರಸಂಗವೂ  ನಡೀತು.