ಮಂತ್ರಾಲಯ ರಸ್ತೆಯಲ್ಲಿರುವ  ಔಟ್  ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ .

ರಾಯಚೂರು ಪೊಲೀಸರು ಹಗಲು ದರೋಡೆಗಿಳಿದಿದ್ದಾರೆ . ಹಾಡ ಹಗಲೇ ನಡೆಯುವ ಅಕ್ರಮ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ . ಮಂತ್ರಾಲಯ ರಸ್ತೆಯಲ್ಲಿರುವ ಔಟ್ ಚೆಕ್ ಪೋಸ್ಟ್ ನಲ್ಲಿ ನಿರಂತರ ವಸೂಲಿ ನಡೆಸುತ್ತಿದ್ದಾರೆ . ಈ ಮಾರ್ಗದಲ್ಲಿ ಸಂಚರಿಸೋ ಆಟೋ ,ಟ್ರ್ಯಾಕ್ಟರ್ ,ಲಾರಿಗಳಿಂದಿಡಿದು ನಗರಕ್ಕೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬರುವ ರೈತರಿಂದ ಪ್ರತಿ ವಾಹನಕ್ಕೆ ಇಂತಿಷ್ಟು ಹಣವನ್ನ ಪೀಕುತ್ತಿದ್ದಾರೆ . ತಪಾಸಣೆ ಹೆಸರಿನಲ್ಲಿ ವಾಹನಗಳನ್ನ ತಡೆಯುತ್ತಾರಾದರೂ ಯಾವುದೇ ದಾಖಲಾತಿ ಪರಿಶೀಲಿಸುವುದು ಇವರ ಉದ್ದೇಶವಾಗಿಲ್ಲ . ತಡೆದ ವಾಹನಸವಾರರು ನೇರವಾಗಿ ಹಣ ನೀಡಿ ಹೋಗುತ್ತಿರಬೇಕು . ಪೊಲೀಸರ ಲಂಚಬಾಕತನ ನಿರಂತರ ನಡೆಯುತ್ತಿದ್ರೂ ಮೇಲಾಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ .ಇನ್ನು ಇದೇ ವೇಳೆ ಪೊಲೀಸರ ಕೃತ್ಯವನ್ನ ಸೆರೆಹಿಡಿಯಲು ಹೋದವರ ಮೇಲೂ ಪೊಲೀಸರು ದರ್ಪ ತೋರಿಸಿದ ಪ್ರಸಂಗವೂ ನಡೀತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred