‘ಆರ್ಎಸ್ಎಸ್ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’!
ರಾಮ ಮಂದಿರ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್! ‘ಆರ್ಎಸ್ಎಸ್ ಪ್ರತಿಕ್ರಿಯೆ ಹಿಂದೂಗಳ ಆತಂಕದ ಪ್ರತೀಕ’! ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಮತ! ‘ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ’! ‘ಆರ್ಎಸ್ಎಸ್ ನ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ’
ನವದೆಹಲಿ(ನ.3): ರಾಮಮಂದಿರ ವಿವಾದದ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಹಲವು ಸಂಘಟನೆಗಳು ಬೇಸರ ವ್ಯಕ್ತಪಡಿಸಿದ್ದು, ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೊಳಿಸಬೇಕೆಂದು ಪಟ್ಟು ಹಿಡಿದಿವೆ.
#WATCH: "Very unfortunate that dilly-dallying about Ram Mandir on the part of the judiciary before 1992, is being repeated. So Ram Mandir supporters are feeling anxious & RSS has only articulated that", says Ram Madhav on RSS' statement 'will launch 1992-like agitation if needed' pic.twitter.com/kHgzwUhE0y
— ANI (@ANI) November 3, 2018
ಈ ನಡುವೆ ಬಿಜೆಪಿ ಮುಖಂಡ ರಾಮ್ ಮಾಧವ್ ಆರ್ಎಸ್ಎಸ್ ಈ ವಿಚಾರವಾಗಿ ತೆಗೆದುಕೊಂಡಿರುವ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ 1992 ರ ವಿಳಂಬವನ್ನೇ ಪುನರಾವರ್ತನೆ ಮಾಡುತ್ತಿದೆ. ನ್ಯಾಯಾಂಗದ ತೀರ್ಪಿಗೆ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಆರ್ಎಸ್ಎಸ್ ಪ್ರಶ್ನೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಗೊಳಿಸುತ್ತಿದೆ ಎಂದು ಹೇಳಿದ್ದಾರೆ.
I cannot say anything about it but yes there is a strong demand from Sangh & Sadhu-Saints who are spearheading the movement for the ordinance route: BJP General Secretary Ram Madhav on being asked if the Central government will bring an ordinance for construction of Ram temple. pic.twitter.com/o2g8aJq0jg
— ANI (@ANI) November 3, 2018
ರಾಮಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಆರ್ಎಸ್ಎಸ್, ರಾಮಮಂದಿರ ನಿರ್ಮಾಣಕ್ಕಾಗಿ ಅಗತ್ಯವಿದ್ದರೆ ಚಳುವಳಿ ಪ್ರಾರಂಭಿಸುವುದಾಗಿಯೂ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಮ್ ಮಾಧವ್, ನ್ಯಾಯಾಂಗ 1992 ರಲ್ಲಿ ಯಾವ ರೀತಿಯಲ್ಲಿ ವಿಳಂಬವನ್ನೇ ಈಗಲೂ ಪುನರಾವರ್ತನೆ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಹೇಳಿಕೆ ಹಿಂದೂಗಳ ಆತಂಕವನ್ನು ಅಭಿವ್ಯಕ್ತಿಗೊಳಿಸುವ ರೀತಿಯಲ್ಲಿದೆ ಎಂದಿದ್ದಾರೆ.