Asianet Suvarna News Asianet Suvarna News

ಬಿಜೆಪಿ, ಆರ್‌ಎಸ್‌ಎಸ್‌ ದೇಶಕ್ಕೆ ಸೋಕಿರುವ ಕ್ಯಾನ್ಸರ್‌: ಸಿದ್ದು

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶಕ್ಕೆ ಸೋಕಿರುವ ಕ್ಯಾನ್ಸರ್‌. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದ್ದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಎಂಬ ಕ್ಯಾನ್ಸರ್‌ಕಾರಕಗಳನ್ನು ಬುಡ ಸಮೇತ ಕಿತ್ತು ಹಾಕಬೇಕು. ಈ ಮೂಲಕ ಸುಳ್ಳು ಹೇಳಿಕೊಂಡು ಜನರಿಗೆ ಟೋಪಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬುದ್ಧಿ ಕಲಿಸಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

RSS and BJP is like cancer to country says Siddaramaiah
Author
Bengaluru, First Published Mar 29, 2019, 12:23 PM IST | Last Updated Mar 29, 2019, 12:23 PM IST

ಬೆಂಗಳೂರು (ಮಾ. 29):  ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶಕ್ಕೆ ಸೋಕಿರುವ ಕ್ಯಾನ್ಸರ್‌. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದ್ದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಎಂಬ ಕ್ಯಾನ್ಸರ್‌ಕಾರಕಗಳನ್ನು ಬುಡ ಸಮೇತ ಕಿತ್ತು ಹಾಕಬೇಕು. ಈ ಮೂಲಕ ಸುಳ್ಳು ಹೇಳಿಕೊಂಡು ಜನರಿಗೆ ಟೋಪಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬುದ್ಧಿ ಕಲಿಸಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಸುಮಲತಾಗೆ ಕಮಲ - ಕೈ ಬಲ : ರೆಬೆಲ್ ನಾಯಕಿ ಬೆನ್ನಿಗೆ ಉಭಯ ಪಕ್ಷ ನಾಯಕರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವ ಸಿದ್ಧತೆ ಕುರಿತು ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರ್‌ಎಸ್‌ಎಸ್‌ನವರು ಗೋಮುಖ್ಯ ವ್ಯಾಘ್ರಗಳು ಮಾತ್ರವಲ್ಲ ದೇಶಕ್ಕೆ ಅಂಟಿರುವ ಕ್ಯಾನ್ಸರ್‌. ಇಂತಹ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಕಳೆದ ಐದು ವರ್ಷದ ಅವಧಿಯಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಒಂದೂ ಭರವಸೆ ಈಡೇರಿಸದೆ ಜನ ವಿರೋಧಿ, ರೈತ ವಿರೋಧಿಗಳಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯಂತಹ ಕೊಳಕು ಮನಸ್ಸಿನ ಜನ ಇಡೀ ದೇಶದಲ್ಲಿ ಯಾರೂ ಇಲ್ಲ. ಜನರಿಗೆ ಟೋಪಿ ಹಾಕಿದ ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ಗೌಡರ ಕುಟುಂಬದ ವಿರುದ್ಧ ಹಾಸನ ಬಿಜೆಪಿ ಅಭ್ಯರ್ಥಿ ಗರಂ

ನನ್ನ, ದೇವೇಗೌಡರ ನಡುವೆ ಜಗಳವಿಲ್ಲ:

ನನಗೂ ದೇವೇಗೌಡರಿಗೂ ವೈಯಕ್ತಿಕವಾಗಿ ಜಗಳವಿಲ್ಲ. ಎರಡು ಪ್ರತ್ಯೇಕ ಪಕ್ಷಗಳಾಗಿ ರಾಜಕೀಯವಾಗಿ ಮಾತ್ರ ಭಿನ್ನಾಭಿಪ್ರಾಯಗಳಿರಬಹುದು. ಇದೀಗ ಮೈತ್ರಿಯಿಂದಾಗಿ ಎಲ್ಲಾ ಸಣ್ಣಪುಟ್ಟಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. ಕಾರ್ಯಕರ್ತರ ಮಟ್ಟದಲ್ಲೂ ಎರಡೂ ಪಕ್ಷದವರು ಭಿನ್ನಾಭಿಪ್ರಾಯ ಮರೆತು ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಹೋರಾಟ ಮಾಡಬೇಕು ಎಂದರು.


 

Latest Videos
Follow Us:
Download App:
  • android
  • ios