ಹಾಸನ ಡಿಸಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ರೋಹಿಣಿ ಹೇಳಿದ್ದೇನು?
ಐಎಎಸ್ ಅಧಿಕಾರಿಯೊಬ್ಬರು ನಿಯೋಜನೆಗೊಂಡ ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಆದರೆ, ರಾಜಕೀಯ ಮೇಲಾಟದಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಹಿಣಿ ಸಿಂಧೂರಿಯನ್ನು ಕೆಲವೇ ತಿಂಗಳಲ್ಲಿ ವರ್ಗಾಯಿಸಲಾಗಿತ್ತು. ಸರಕಾರದ ಈ ಕ್ರಮವನ್ನು ಪ್ರಶ್ನಿಸಿದ ಅವರು ಕೋರ್ಟ್ ಮೆಟ್ಟಿಲೇರಿ ಜಯಿಸಿದ್ದಾರೆ. ಮತ್ತೆ ಹಾಸನ ಡಿಸಿಯಾಗಿ ಅಧಿಕಾರಿ ಸ್ವೀಕರಿಸಿಕೊಂಡಿದ್ದಾರೆ.
ಹಾಸನ: ಸಾಕಷ್ಟು ಕಾನೂನು ಹೋರಾಟ ನಡಿಸಿದ ನಂತರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಾನೂನು ಹೋರಾಟದಲ್ಲಿ ಗೆಲುವಿನ ನಗೆ ಬೀರಿದ ರೋಹಿಣಿ ಈ ಸಮಯದಲ್ಲಿ ಹೇಳಿದ್ದಿಷ್ಟು.
- ಜಿಲ್ಲಾಧಿಕಾರಿಗೆ ಕನಿಷ್ಠ ಎರಡು ವರ್ಷ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂಬ ನಿಯಮವಿದೆ. ಆರು ತಿಂಗಳು ಜಿಲ್ಲೆಯ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಎಲ್ಲವನ್ನೂ ಅರ್ಥಮಾಡಿಕೊಂಡ ಕೂಡಲೇ ವರ್ಗವಾದರೆ, ಸಮಸ್ಯೆಯಾಗುತ್ತೆ.
- ಇದು ಜಿಲ್ಲೆಯ ಮಟ್ಟಿಗೆ ತೊಂದರೆಯಾಗಲಿದೆ. ಕನಿಷ್ಠ ಅವಧಿ ಇರೋ ಬಗ್ಗೆ ಯಾರೂ ಕೇಳಿಲ್ಲ. ಹಾಗಾಗಿ ಜನರಿಗೆ ಈ ಬಗ್ಗೆ ಗೊತ್ತಿಲ್ಲ.
-ಮುಂದಿನ ಕೆಲವು ತಿಂಗಳಿನಲ್ಲಿ ಮತ್ತಷ್ಟು ಉತ್ತಮ ಕೆಲಸ ಮಾಡಲು ಆದ್ಯತೆ.
- ಸಮ್ಮಿಶ್ರ ಸರ್ಕಾರ ಇದೆ ಎನ್ನೋದು ಅದು ರಾಜಕೀಯ.
ನಾನು ಹಾಸನ ಜಿಲ್ಲಾಧಿಕಾರಿಯಷ್ಟೇ. ಈ ಮೊದಲು ಹೇಗೆ ಕೆಲಸ ಮಾಡುತ್ತಿದ್ದೇನೊ, ಅದೇ ಕೆಲಸಗಳನ್ನು ಮುಂದುವರಿಸುವೆ.
ರಂಣೀಪ್ ಸ್ಥಿತಿ ಅತಂತ್ರ
ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಮುಂದುವರಿಕೆ
ರೋಹಿಣಿ ವರ್ಗಾವಣೆ: ಸರಕಾರ ನಿಲುವು ತಿಳಿಸುವುದು ಯಾವಾಗ?