ಜಮೀರ್ ಅಹಮದ್ ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ: ರೇವಣ್ಣ ಕಿಡಿ
ರಾಜ್ಯ ಕಾಂಗ್ರೆಸ್'ನಲ್ಲಿರುವ ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್, ಜಮೀರ್ ಅಹಮದ್'ನನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ, ಆತ ಆರ್.ವಿ.ದೇವರಾಜ್'ರಿಗೆ ಟೋಪಿ ಹಾಕಿದ್ದಾನೆ. ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ. ಹೀಗಂತ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಜಮೀರ್ ಅಹ್ಮದ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಬೆಂಗಳೂರು (ಅ.05): ರಾಜ್ಯ ಕಾಂಗ್ರೆಸ್'ನಲ್ಲಿರುವ ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್, ಜಮೀರ್ ಅಹಮದ್'ನನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ, ಆತ ಆರ್.ವಿ.ದೇವರಾಜ್'ರಿಗೆ ಟೋಪಿ ಹಾಕಿದ್ದಾನೆ. ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ. ಹೀಗಂತ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಜಮೀರ್ ಅಹ್ಮದ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ರೇವಣ್ಣ, ದೇವೇಗೌಡರಿಗೆ ಪರಿಚಯ ಮಾಡಿದ್ದು ನಾನು, ಕಾಂಗ್ರೆಸ್ ನಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲ, ಆ ಕಾರಣದಿಂದಲೇ ಪರಮೇಶ್ವರ್ ಜಮೀರ್'ನನ್ನು ಹೊಗಳುತ್ತಿದ್ದಾರೆ ಅಂತ ಕಿಡಿಕಾರಿದರು. ಕಾಂಗ್ರೆಸ್'ನಲ್ಲಿ ಮೇವು ಸೊಂಪಾಗಿದ್ದು ಜಮೀರ್ ಅಹಮದ್ ಮೇಯಲು ಹೋಗುತ್ತಿದ್ದಾನೆ ಎಂದು ರೇವಣ್ಣ ಏಕವಚನದಲ್ಲಿ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.