Asianet Suvarna News Asianet Suvarna News

ಜಮೀರ್ ಅಹಮದ್ ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ: ರೇವಣ್ಣ ಕಿಡಿ

ರಾಜ್ಯ ಕಾಂಗ್ರೆಸ್'ನಲ್ಲಿರುವ ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್, ಜಮೀರ್ ಅಹಮದ್'ನನ್ನು  ನಾನು ಲೆಕ್ಕಕ್ಕೆ ಇಟ್ಟಿಲ್ಲ, ಆತ  ಆರ್.ವಿ.ದೇವರಾಜ್'ರಿಗೆ ಟೋಪಿ ಹಾಕಿದ್ದಾನೆ. ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ. ಹೀಗಂತ  ಜೆಡಿಎಸ್​​ ಮುಖಂಡ ಎಚ್ ಡಿ ರೇವಣ್ಣ ಜಮೀರ್ ಅಹ್ಮದ್ ಬಗ್ಗೆ  ಏಕವಚನದಲ್ಲಿ ಮಾತನಾಡಿದ್ದಾರೆ.

Revanna Slamps Jameer Ahmad Singularly

ಬೆಂಗಳೂರು (ಅ.05): ರಾಜ್ಯ ಕಾಂಗ್ರೆಸ್'ನಲ್ಲಿರುವ ಮುಸ್ಲಿಂ ನಾಯಕರು ದೇವೇಗೌಡರ ಪ್ರಾಡೆಕ್ಟ್, ಜಮೀರ್ ಅಹಮದ್'ನನ್ನು  ನಾನು ಲೆಕ್ಕಕ್ಕೆ ಇಟ್ಟಿಲ್ಲ, ಆತ  ಆರ್.ವಿ.ದೇವರಾಜ್'ರಿಗೆ ಟೋಪಿ ಹಾಕಿದ್ದಾನೆ. ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ. ಹೀಗಂತ  ಜೆಡಿಎಸ್​​ ಮುಖಂಡ ಎಚ್ ಡಿ ರೇವಣ್ಣ ಜಮೀರ್ ಅಹ್ಮದ್ ಬಗ್ಗೆ  ಏಕವಚನದಲ್ಲಿ ಮಾತನಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ರೇವಣ್ಣ, ದೇವೇಗೌಡರಿಗೆ ಪರಿಚಯ ಮಾಡಿದ್ದು ನಾನು, ಕಾಂಗ್ರೆಸ್ ನಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲ, ಆ ಕಾರಣದಿಂದಲೇ ಪರಮೇಶ್ವರ್ ಜಮೀರ್'ನನ್ನು ಹೊಗಳುತ್ತಿದ್ದಾರೆ ಅಂತ ಕಿಡಿಕಾರಿದರು. ಕಾಂಗ್ರೆಸ್'ನಲ್ಲಿ ಮೇವು ಸೊಂಪಾಗಿದ್ದು  ಜಮೀರ್ ಅಹಮದ್ ಮೇಯಲು ಹೋಗುತ್ತಿದ್ದಾನೆ ಎಂದು ರೇವಣ್ಣ  ಏಕವಚನದಲ್ಲಿ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow Us:
Download App:
  • android
  • ios