Asianet Suvarna News Asianet Suvarna News

ಎಣ್ಣೆ ಬೇಕು ಅಣ್ಣ, ಸಿಗದ್ದಕ್ಕೆ ಬಾರ್‌ಗೆ ಬೆಂಕಿ ಇಡೋದಾ!

ಎಣ್ಣೆ ಕುಡಿದ ಮೇಲೆ ಏನೆನೋ ಮಾಡಿಸುತ್ತೆ, ಎಣ್ಣೆ ಸಿಗದೇ ಇದ್ದರೂ ಜನ ಏನನ್ನಾದರೂ ಮಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕುಡಿಯಲು ಮದ್ಯ ಕೊಡದ ಬಾರ್ ಗೆ ಕುಡುಕರು ಬೆಂಕಿ ಇಟ್ಟಿದ್ದಾರೆ. ಇದು ನಮ್ಮ ಮಂಡ್ಯ ಜಿಲ್ಲೆಯದ್ದೆ ಸುದ್ದಿ.

Refuse to give liquor, drinkers put fire to bar
Author
Bengaluru, First Published Aug 24, 2018, 1:26 PM IST

 

ಮದ್ದೂರು(ಆ.24] ಮದ್ಯ ಕೊಡಲು ನಿರಾಕರಿಸಿದ ಬಾರ್‌ಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತಾಲೂಕಿನ ಶಿವಪುರದಲ್ಲಿ ಬುಧವಾರ ಮಧ್ಯರಾತ್ರಿ ಕುಡುಕರು ದುಷ್ಕೃತ್ಯ ಮಾಡಿದ್ದಾರೆ.

ಶಿವಪುರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಗೌಡ ಬಾರ್‌ಗೆ ರಾತ್ರಿ 11.15ರ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ಮದ್ಯ ಕೇಳಿದ್ದಾರೆ. ಈ ವೇಳೆ ಅವಧಿ ಮುಗಿದ ಕಾರಣ ಮದ್ಯ ನೀಡಲು ಕ್ಯಾಷಿಯರ್‌ ನಿರಾಕರಿಸಿದ್ದಾರೆ. ಬಳಿಕ ಮಧ್ಯರಾತ್ರಿ 12ರ ವೇಳೆಗೆ ಮತ್ತೆ ಪೆಟ್ರೋಲ್‌ ತುಂಬಿದ ಬಾಟಲಿಗಳೊಂದಿಗೆ ಆಗಮಿಸಿದ ಅದೇ ಇಬ್ಬರು, ಬಾರ್‌ ಮುಂಭಾಗದ ರೋಲಿಂಗ್‌ ಶೆಟರ್‌ ಕೆಳಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಈ ವೇಳೆ ದಟ್ಟವಾದ ಹೊಗೆ ಆವರಿಸಿದ್ದು, ಎಚ್ಚರಗೊಂಡ ಬಾರ್‌ನಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಿ, ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಾರ್‌ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಮದ್ಯ ದೊರೆಯದೇ ಹಿಂದೆ ಹೋಗಿದ್ದ ಇಬ್ಬರೇ ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Follow Us:
Download App:
  • android
  • ios