ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದ ವಿಚಾರಣೆ ಮತ್ತೆ ಶುರುವಾಗಿದ್ದು ಅಗ್ನಿ ಶ್ರೀಧರ್ ಖುಲಾಸೆಯಾಗಿದ್ದ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ.  ಅಗ್ನಿ ಶ್ರೀಧರ್​ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಹಳೆ ಕೇಸು.ಡಿಜಿ ಆರ್​.ಕೆ. ದತ್ತ ಭೇಟಿ ವೇಳೆ ನೀಡಿದ್ದ ಲಿಖಿತ ಹೇಳಿಕೆಯಲ್ಲಿ ಕೊತ್ವಾಲ್ ಕೊಲೆ  ಕೇಸ್​ನಲ್ಲಿ ಭಾಗಿಯಾಗಿದ್ದೆ ಎಂಬ ಹೇಳಿಕೆ ಅಗ್ನಿ ಶ್ರೀಧರ್ ಗೆ ಸಮಸ್ಯೆ ತಂದೊಡ್ಡಿದೆ.

ಬೆಂಗಳೂರು (ಮಾ.30): ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದ ವಿಚಾರಣೆ ಮತ್ತೆ ಶುರುವಾಗಿದ್ದು ಅಗ್ನಿ ಶ್ರೀಧರ್ ಖುಲಾಸೆಯಾಗಿದ್ದ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ. ಅಗ್ನಿ ಶ್ರೀಧರ್​ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಹಳೆ ಕೇಸು.
ಡಿಜಿ ಆರ್​.ಕೆ. ದತ್ತ ಭೇಟಿ ವೇಳೆ ನೀಡಿದ್ದ ಲಿಖಿತ ಹೇಳಿಕೆಯಲ್ಲಿ ಕೊತ್ವಾಲ್ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದೆ ಎಂಬ ಹೇಳಿಕೆ ಅಗ್ನಿ ಶ್ರೀಧರ್ ಗೆ ಸಮಸ್ಯೆ ತಂದೊಡ್ಡಿದೆ.

ಏನಿದು ಕೊತ್ವಾಲ್, ಅಗ್ನಿ ಶ್ರೀಧರ್ ಪ್ರಕರಣ..?
ಮಾ. 22, 1986ರಲ್ಲಿ ತುಮಕೂರಿನಲ್ಲಿ ಕೊತ್ವಾಲ ರಾಮಚಂದ್ರನ‌ ಕೊಲೆಯಾಗಿತ್ತು. ಈ ಕೊಲೆ ಇಡೀ ಬೆಂಗಳೂರನ್ನೇ ನಡುಗಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಅಗ್ನಿ ಶ್ರೀಧರ್ ಮತ್ತು ಬಚ್ಚನ್ ಆರೋಪಿಗಳಾಗಿದ್ದರು. ಇದನ್ನು ಶ್ರೀಧರ್, ಹಲವು ಕಡೆ ಹೇಳಿಕೊಂಡಿದ್ದರೂ, ಕೋರ್ಟ್​ನಲ್ಲಿ ಮಾತ್ರ ಅದು ಋಜುವಾತಾಗಿರಲಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದರು. ಆದರೆ, ಈ ಪ್ರಕರಣಕ್ಕೆ ಈಗ ಮರುಜೀವ ಸಿಗುವ ಸಾಧ್ಯತೆ ಇದೆ.

ಇತ್ತೀಚೆಗೆ ತಮ್ಮ ಮನೆ ಮೇಲೆ ದಾಳಿ ನಡೆಸಿದ್ದರ ಕುರಿತಂತೆ ಡಿಜಿ ಆರ್​.ಕೆ. ದತ್ತಾ ಅವರನ್ನು ಭೇಟಿಯಾಗಿದ್ದ ಶ್ರೀಧರ್, ತಾನು ಬದಲಾಗಿದ್ದೇನೆ, ರೌಡಿಸಂ ಬಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅದೇ ಲಿಖಿತ ಹೇಳಿಕೆಯಲ್ಲಿ 1986ರ ಕೊತ್ವಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೆ ಎಂಬ ಉಲ್ಲೇಖವೂ ಇದೆ. ಈ ಹಿನ್ನೆಲೆಯಲ್ಲಿ 1986ರ ಕೊತ್ವಾಲ್ ಮರ್ಡರ್ ಕೇಸ್​ನ್ನು ರೀ-ಓಪನ್ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಆ ಕೊಲೆ ಕೇಸ್​ನ್ನು ಮತ್ತೆ ತನಿಖೆಗೊಳಪಡಿಸುವ ಸೂಚನೆ ಕೊಟ್ಟಿದ್ದಾರೆ.