ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.

ನವದೆಹಲಿ(ಮಾ.22): ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲ್ವೆಗಳಿಗಾಗಿ ಕಾಯ್ದಿರಿಸಿದ ಟಿಕೆಟ್‌ಗೆ ಸೀಟು ಖಾತ್ರಿಯಾಗದೇ ಸಂದರ್ಭದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ರಾಜಧಾನಿ ಅಥವಾ ಶತಾಬ್ದಿ ರೈಲುಗಳಲ್ಲೂ ಪ್ರಯಾಣ ಬೆಳೆಸುವ ಅವಕಾಶ ಮಾಡಿಕೊಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಕಲ್ಪ ಹೆಸರಿನ ಈ ಯೋಜನೆ ಏ.1ರಿಂದ ಜಾರಿಗೆ ಬರಲಿದೆ. ಈ ಯೋಜನೆಯಡಿ ಒಂದು ವೇಳೆ ಸೀಟು ಖಾತ್ರಿಯಾಗದೇ ಹೋದಲ್ಲಿ, ಅದೇ ಮಾರ್ಗದಲ್ಲಿ ಸಂಚರಿಸುವ ಮೇಲ್ದರ್ಜೆಯ ರೈಲಿನಲ್ಲಿ ಸೀಟು ಖಾಲಿ ಇದ್ದರೆ, ಪ್ರಯಾಣಿಕರು ಅದರಲ್ಲಿ ಸಂಚರಿಸಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಯಾವುದೇ ಹೆಚ್ಚಿನ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.

ಪರೀಕ್ಷಾರ್ಥವಾಗಿ 6 ಮಾರ್ಗಗಳ ರೈಲುಗಳಲ್ಲಿ ಜಾರಿಗೊಳಿಸಲಾದ ಯೋಜನೆ ಯಶಸ್ವಿ ಬಳಿಕ ಎಲ್ಲ ರೈಲು ಮಾರ್ಗಗಳಿಗೂ ವಿಸ್ತರಣೆಯಾಗುತ್ತಿದೆ.

ರಾಷ್ಟ್ರದ ಬಹುತೇಕ ಕಡೆ ಸಂಚರಿಸಲಿರುವ ಸುವಿಧಾ, ದುರೊಂತೊ, ಶತಾಬ್ದಿ ಮತ್ತು ರಾಜಧಾನಿಯಂಥ ಪ್ರೀಮಿಯರ್ ರೈಲುಗಳಲ್ಲಿ ದಿನವೊಂದಕ್ಕೆ ಖಾಲಿಯೇ ಉಳಿಯುವ 1.5 ಲಕ್ಷ ಸೀಟಿನ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವವೆನಿಸಿದೆ. ಹಲವು ಕಾರಣಗಳಿಗಾಗಿ ಪ್ರಯಾಣಿಕರು ರೈಲ್ವೆ ಟಿಕೆಟ್ ರದ್ದು ಮಾಡುವುದರಿಂದ ಪ್ರತಿ ವರ್ಷ 7,500 ಕೋಟಿ ಹಣವನ್ನು ರೈಲ್ವೆ ಇಲಾಖೆ ಮರುಪಾವತಿ ಮಾಡುತ್ತಿದೆ. ಇದನ್ನು ಕಡಿಮೆಗೊಳಿಸುವ ನೂತನ ಯೋಜನೆ ಸಹಕಾರಿಯಾಗುವ ಸಾಧ್ಯತೆಯಿದೆ.