ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕಾಂಗ್ರೆಸ್ ಪಕ್ಷ ರೈತರ ಸಮಸ್ಯೆಗಳನ್ನು ವಿವರಿಸಿದ್ದಾರೆ ಈ ವೇಳೆ 'ಕೃಷಿ ಸಾಲಕ್ಕಾಗಿ ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಿಸುವುದರೊಂದಿಗೆ ರೈತರಿಗೆ ಉಚಿತ ವಿದ್ಯುತ್ ಸೌಲಭ್ಯನ್ನೂ ಒದಗಿಸಿಕೊಡುವಂತೆ ರಾಹುಲ್ ಗಾಂಧಿ ಪ್ರಧಾನಿಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ರೈತರ ಾತ್ಮಹತ್ಯೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ನವದೆಹಲಿ(ಡಿ.16): ನೋಟ್ ಬ್ಯಾನ್'ನಿಂದ ಕಂಗಾಲಾಗಿರುವ ರೈತರಿಗೆ ಮೋದಿ ಸರ್ಕಾರ ಬಹುದೊಡ್ಡ ಗಿಫ್ಟ್ ಕೊಡಲಿದೆ. ಕೆಲ ದಿನಗಳಲ್ಲೇ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕಾಂಗ್ರೆಸ್ ಪಕ್ಷ ರೈತರ ಸಮಸ್ಯೆಗಳನ್ನು ವಿವರಿಸಿದ್ದಾರೆ ಈ ವೇಳೆ 'ಕೃಷಿ ಸಾಲಕ್ಕಾಗಿ ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಿಸುವುದರೊಂದಿಗೆ ರೈತರಿಗೆ ಉಚಿತ ವಿದ್ಯುತ್ ಸೌಲಭ್ಯನ್ನೂ ಒದಗಿಸಿಕೊಡುವಂತೆ ರಾಹುಲ್ ಗಾಂಧಿ ಪ್ರಧಾನಿಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ರೈತರ ಾತ್ಮಹತ್ಯೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ಈ ವೇಳೆ ರೈತರ ಹಸ್ತಾಕ್ಷರವಿದ್ದ ಒಂದು ವಿಜ್ಞಾಪನೆಯನ್ನು ಪ್ರಧಾನಿ ಮೋದಿಗೆ ಸಲ್ಲಿಸಿದ್ದು, ಇದರಲ್ಲಿ ರೈತರೇ ಉಚಿತ ವಿದ್ಯತ್ ಸೌಲಭ್ಯ ನೀಡುವಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯೂ 'ಆಗಾಗ್ಗೆ ಭೇಟಿ ಮಾಡುತ್ತಿರಿ' ಎಂದು ರಾಹುಲ್ ಗಾಂಧಿಯ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನೋಟ್ ಬ್ಯಾನ್ ಬಳಿಕ ಮೋದಿ ಸರ್ಕಾರವನ್ನು ನಿರಂತರವಾಗಿ ಠೀಕಿಸುತ್ತಾ ಬಂದಿದ್ದ ರಾಹುಲ್ ಗಾಂಧಿಯ ಈ ಭೇಟಿ ದೇಶಾದ್ಯಂತ ಭಾರೀ ಸದ್ದು ಮಾಡಿದೆ.
