ರಾಜ್ಯ ಸರ್ಕಾರವೇ 420 - ಸಿಎಂ ವಿರುದ್ಧವೆ 47 ಪ್ರಕರಣ: ಆರ್. ಅಶೋಕ್
ವಿಧಾನಸೌಧದಲ್ಲಿ ಆರ್. ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ಗೂಂಡಾಗಿರಿಯನ್ನು ಸದನದ ಹೊರಗೆ ನೋಡಿದ್ದೆವು ಇಂದು ಸದನದ ಒಳಗೂ ನೋಡಿದೆವು ಎಂದು ಹೇಳಿದ್ದಾರೆ.
ಬೆಂಗಳೂರು : ವಿಧಾನಸೌಧದಲ್ಲಿ ಆರ್. ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ಗೂಂಡಾಗಿರಿಯನ್ನು ಸದನದ ಹೊರಗೆ ನೋಡಿದ್ದೆವು ಇಂದು ಸದನದ ಒಳಗೂ ನೋಡಿದೆವು ಎಂದು ಹೇಳಿದ್ದಾರೆ.
ಅಲ್ಲದೇ ಬಿಜೆಪಿ ಸರ್ಕಾರವನ್ನು 420 ಸರ್ಕಾರ ಎಂದು ಆಪಾದಿಸಿದ್ದಾರೆ. ನರೇಂದ್ರ ಮೋದಿ ಎಷ್ಟು ಕ್ಲೀನ್ ಎಂದು ಇಡೀ ದೇಶಕ್ಕೆ ಗೊತ್ತಿದೆ. ನಿಜವಾಗಿ ಕಾಂಗ್ರೆಸ್ ಸರ್ಕಾರವೇ 420 ಸರ್ಕಾರ ಎಂದು ಅಶೋಕ್ ಹೇಳಿದ್ದಾರೆ.
ಅಲ್ಲದೇ ಸಿಎಂ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅವರ ವಿರುದ್ಧ 47 ಪ್ರಕರಣಗಳಿವೆ. ಹೀಗಿದ್ದರೂ ಕೂಡ ಪ್ರಧಾನಿ ಮೋದಿ ಅವರ ಸರ್ಕಾರವನ್ನು 420 ಸರ್ಕಾರ ಎಂದು ಹೇಳುತ್ತಾರೆ. ಇಂತಹ ಭ್ರಷ್ಟರನ್ನು ನಾವು ನೋಡಿಲ್ಲ ಎಂದು ಅಶೋಕ್ ಹೇಳಿದ್ದಾರೆ.