ಕಾಗೋಡು ವಿರುದ್ಧ ಟಾಯ್ಲೆಟ್’ನಲ್ಲಿ ಕರಪತ್ರ
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಕರಪತ್ರಗಳನ್ನು ಮುದ್ರಿಸಿ ಬುಧವಾರ ವಿಧಾನಸೌಧದ ಶೌಚಾಲಯಗಳಲ್ಲಿ ಹಾಕಿ ಪ್ರತಿಭಟಿಸಲಾಗಿದೆ. ಸಚಿವರು ಶಿವಮೊಗ್ಗದ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು.
ಬೆಂಗಳೂರು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಕರಪತ್ರಗಳನ್ನು ಮುದ್ರಿಸಿ ಬುಧವಾರ ವಿಧಾನಸೌಧದ ಶೌಚಾಲಯಗಳಲ್ಲಿ ಹಾಕಿ ಪ್ರತಿಭಟಿಸಲಾಗಿದೆ.
ಸಚಿವರು ಶಿವಮೊಗ್ಗದ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಬ್ರಾಹ್ಮಣರೂ ಮಾಂಸ ತಿನ್ನುತ್ತಿದ್ದರು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೆಲವು ಅಪರಿಚಿತರು ವಿಧಾನಸೌಧದ ಎಲ್ಲಾ ಮಹಡಿಗಳ ಶೌಚಾಲಯದಲ್ಲೂ ಸಚಿವರ ವಿರುದ್ಧದ ಕರಪತ್ರಗಳನ್ನು ಹಾಕಿ ಹೋಗಿದ್ದಾರೆ.
ಆ ಕರಪತ್ರಗಳಲ್ಲಿ ಸಚಿವ ಕಾಗೋಡು ಅವರು ಚಿತ್ರ ಪ್ರಕಟಿಸಿದ್ದಾರೆ. ಅದರ ಮೇಲೆ ‘ಬ್ರಾಹ್ಮಣರನ್ನು ನಿಂದಿಸಿದ್ದಕ್ಕೆ’ ಎಂದು ಬರೆಯಲಾಗಿದೆ.