ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್​ನಾಥ್​ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ.

ಬೆಂಗಳೂರು(ಜು.05): ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಇಂದು ಎನ್'ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್ ಕೋವಿಂದ್ ಅವರ ಬೆಂಗಳೂರು ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ವಹಿಸಿದ್ದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಮ್​ನಾಥ್​ ಕೋವಿಂದ್ ಆಗಮಿಸಿ ತಮ್ಮ ಪರ ಮತ ಚಲಾಯಿಸುವಂತೆ ಬಿಜೆಪಿಯ ಹಾಗೂ ತಮಗೆ ಬೆಂಬಲ ವ್ಯಕ್ತಪಡಿಸಿದ ಎಲ್ಲ ಪ್ರಮುಖರಿಗೆ ಮನವಿ ಮಾಡಿದರು.ಈ ಕಾರ್ಯಕ್ರಮ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ ಕೋಲಿ ಸಮುದಾಯದ ಕೆಲ ಮುಖಂಡರು ತಮಗೂ ರಾಮ್​ನಾಥ್​ ಕೋವಿಂದ್ ಅವರ ಭೇಟಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ. ಅವಕಾಶ ಸಿಕ್ಕದಿದ್ದಾಗ ತಳ್ಳಾಟ ನೂಕಾಟ ನಡೆಯಿತು.

ಆದರೆ ಲಿಂಬಾವಳಿ ಅವರು ಹೇಳುವ ಪ್ರಕಾರ, ಅವರ ಮೇಲೆ ಯಾವುದೇ ಹಲ್ಲೆ ಯತ್ನ ನಡೆದಿಲ್ಲ. ರಾಮ್​ನಾಥ್​ ಕೋವಿಂದ್​ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳಲು ತಡವಾದ ಕಾರಣ ಯಾರನ್ನೂ ಭೇಟಿ ಮಾಡದಿರುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರ ಭೇಟಿಗೆ ಅವಕಾಶ ನಿರಾಕರಿಸಲಾಯಿತು ಎನ್ನುವುದು ಲಿಂಬಾವಳಿ ಅವರ ಸ್ಪಷ್ಟನೆ.ಒಟ್ಟಾರೆ, ರಾಷ್ಟ್ರೀಯ ಪ್ರಜಸತ್ತಾತ್ಮಕ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್​ ಕೋವಿಂದ್ ಅವರ ಬೆಂಗಳೂರು ಭೇಟಿ ಕಾರ್ಯಕ್ರಮ ತಳ್ಳಾಟ, ನೂಕಾಟ, ವಾಗ್ದಾದಕ್ಕೂ ಸಾಕ್ಷಿಯಾಯ್ತು.