ಪರ್ಯಾಯವಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದೆವು. ಅದಕ್ಕೆ ಸಂಘಟಕರು ಒಪ್ಪಿಕೊಳ್ಳಲಿಲ್ಲ. ಮುಂದಿನ ಬಾರಿ ಪರಿಸ್ಥಿತಿಗೆ ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು

ಬೆಂಗಳೂರು(ಜು.21):ವುಡನ್ ಫ್ಲೋರಿಂಗ್ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾಧ್ಯವಾದರೆ ಮಾತ್ರ ಮುಂದಿನ ವರ್ಷ ‘ಪ್ರೊ ಕಬಡ್ಡಿ’ಗೆ ಅವಕಾಶ ಕಲ್ಪಿಸಲಾಗುವುದು. ಇಲ್ಲವಾದಲ್ಲಿ, ಬೇರೆಡೆ ವ್ಯವಸ್ಥೆ ಮಾಡುವುದಾಗಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. ಮಹಿಳಾ ಬಾಸ್ಕೆಟ್‌ಬಾಲ್ ಟೂರ್ನಿ ಅಕ್ಟೋಬರ್‌ವರೆಗೂ ನಡೆಯುತ್ತಿರುವ ಕಾರಣ ಈ ವರ್ಷ ಪ್ರೊ ಕಬಡ್ಡಿಗೆ ಕ್ರೀಡಾಂಗಣ ನೀಡಲು ಸಾಧ್ಯವಾಗಿಲ್ಲ. ಪರ್ಯಾಯವಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಯಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದೆವು. ಅದಕ್ಕೆ ಸಂಘಟಕರು ಒಪ್ಪಿಕೊಳ್ಳಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ ಬಾರಿ ಪರಿಸ್ಥಿತಿಗೆ ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು ಎಂದರು. ಕ್ರೀಡಾಂಗಣದಲ್ಲಿ ಈ ಹಿಂದೆ ಸಿಸಿಟೀವಿ ಕ್ಯಾಮೆರಾಗಳೇ ಕಳ್ಳತನವಾಗಿದ್ದವು. ಈ ಸಂಬಂಧ ನಿರ್ವಹಣೆ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸುವಂತೆಯೂ ಸೂಚನೆ ನೀಡಿದ್ದೇನೆ. ಕ್ರೀಡೆ ಎಂಬುದು ಕೇವಲ ಆಟವಲ್ಲ, ಶಿಸ್ತು ಮುಖ್ಯ. ರಕ್ಷಣೆ, ಭದ್ರತೆ, ಸೌಲಭ್ಯಕ್ಕೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.