ಯೋಗಿ ಸರ್ಕಾರದ ವಿರುದ್ಧ ಪ್ರಕಾಶ್ ರೈ ಚಾಟಿ
ಹಜ್ ಭವನಕ್ಕೆ ಬಳಿಯಲಾಗಿದ್ದ ಕೇಸರಿ ಬಣ್ಣದ ವಿಚಾರವನ್ನು ಪ್ರಸ್ತಾಪಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪುನಃ ಟೀಕಾಪ್ರಹಾರ ಮಾಡಿದ್ದಾರೆ.
ಲಖನೌ(09): ಹಜ್ ಭವನಕ್ಕೆ ಬಳಿಯಲಾಗಿದ್ದ ಕೇಸರಿ ಬಣ್ಣದ ವಿಚಾರವನ್ನು ಪ್ರಸ್ತಾಪಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪುನಃ ಟೀಕಾಪ್ರಹಾರ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರೈ, ‘ಗೋಡೆಗಳ ಬಣ್ಣ ಬದಲಾವಣೆ ಮಾಡುವುದೇ ವಿಕಾಸವೇ?,’ ಎಂದು ಪ್ರಶ್ನಿಸಿದ್ದಾರೆ.
Is changing colour of a wall VIKAS....?? What about the farmers dumping potatoes in your front yard...#justasking pic.twitter.com/v1OOJfYPRd
— Prakash Raj (@prakashraaj) January 7, 2018
ಇದರ ಜತೆಗೆ, ‘ರೈತರು ಬೆಲೆ ಕುಸಿತದಿಂದ ಆಲೂಗಡ್ಡೆಯನ್ನು ನಿಮ್ಮ ಮನೆ ಎದುರು ಸುರಿಯುತ್ತಿದ್ದಾರೆ. ಆದಾಗ್ಯೂ ನಿಮ್ಮ ಕೃಷಿ ಸಚಿವ, ರೈತರು ಬೆಳೆದ ಆಲೂಗಡ್ಡೆ ಉತ್ತಮ ಗುಣಮಟ್ಟದಲ್ಲ ಎನ್ನುತ್ತಿದ್ದಾರೆ. ರೈತರ ಕಷ್ಟ ಅರ್ಥೈಸಿಕೊಳ್ಳುವುದು ಹೀಗೆಯೇ?’ ಎಂದು ರೈ ಟೀಕಿಸಿದ್ದಾರೆ.