ಪಾಕ್ ಮಾಜಿ ಅಧಿಕಾರಿಗೆ ಅಡಲ್ಟ್ ಸ್ಟಾರ್ ಧನ್ಯವಾದ! ನಿಮ್ಮಿಂದೆ ಎಲ್ಲ
ನೀಲಿ ಚಿತ್ರ ತಾರೆಗೆ ಕಾಶ್ಮೀರದ ಯುವಕ ಎಂದ ಪಾಕ್ ರಾಯಭಾರ ಅಧಿಕಾರಿ/ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್/ ಹಾಗಾದರೆ ಅಸಲಿ ಕತೆ ಏನು?
ನವದೆಹಲಿ[ಸೆ. 04] ತಪ್ಪು ಟ್ವೀಟ್ ಮಾಡಿದ್ದಕ್ಕೆ ಒಂದು ಕಡೆ ಆಕ್ರೋಶ.. ಟ್ರೋಲ್.. ಆದರೆ ಇನ್ನೊಂದು ಕಡೆ ಇದೇ ವಿಚಾರಕ್ಕೆ ಧನ್ಯವಾದ! ಏನು ಅರ್ಥ ಆಗ್ತಾ ಇಲ್ವಾ.. ಸುದ್ದಿ ಓದಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಪೆಲೆಟ್ ಗುಂಡೇಟಿನಿಂದ ಗಾಯಗೊಂಡ ಕಾಶ್ಮೀರಿ ಯುವಕ ಎಂದು ಪಾಕಿಸ್ತಾನದ ಭಾರತದಲ್ಲಿನ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ನೀಲಿಚಿತ್ರಗಳ ತಾರೆ ಜಾನಿ ಸಿನ್ಸ್ನ ಫೋಟೋವನ್ನು ಟ್ವೀಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ನೆಟ್ಟಿಗರು ಪಾಕ್ ರಾಜತಾಂತ್ರಿಕ ಅಧಿಕಾರಿಯ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ್ದರು.
ಆದರೆ ಇದಕ್ಕೆ ಪ್ರತಿಯಾಗಿ ಅಬ್ದುಲ್ ಬಸಿತ್ಗೆ ಜಾನಿ ಸಿನ್ಸ್ ಧನ್ಯವಾದ ಅರ್ಪಿಸಿದ್ದಾರೆ. ಅಬ್ದುಲ್ ಬಸಿತ್ ಟ್ವೀಟ್ ವೈರಲ್ ಆದ ನಂತರ ಜಾನಿ ಸಿನ್ಸ್ ಟ್ವಿಟರ್ ಖಾತೆಯನ್ನು ಫಾಲೋ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ತಮ್ಮ ಟ್ವಿಟರ್ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿದ ಅಬ್ದುಲ್ ಬಿಸತ್ಗೆ ಧನ್ಯವಾದ ಸಲ್ಲಿಸಿ ನನ್ನ ಕಣ್ಣಿಗೆ ಏನೂ ಆಗಿಲ್ಲ, ನಾನು ಆರೋಗ್ಯವಾಗಿದ್ದೇನೆ ಎಂದು ಟ್ವೀಟ್ ಮೂಲಕವೇ ಉತ್ತರಿಸಿದ್ದಾರೆ.
ಈ ಬಸ್ ತುಂಬಾ ನೀಲಿ ನಟಿಯರದ್ದೇ ಹವಾ!
ಜಾನಿ ಸಿನ್ಸ್ ಫೋಟೋ ಹಾಕಿ ಕಾಶ್ಮೀರದಲ್ಲಿ ಭಾರತೀಯ ಭದ್ರತಾಪಡೆಗಳ ಪೆಲೆಟ್ ಗುಂಡಿನ ದಾಳಿಗೆ ತುತ್ತಾಗಿರುವ ಅನಂತ್ನಾಗ್ ಜಿಲ್ಲೆಯ ಯೂಸೂಫ್ ಚಿತ್ರವಿದು… ಪೆಲೆಟ್ ಗನ್ಗಳಿಂದಾಗಿ ಈತ ತನ್ನ ಕಣ್ಣು ಕಳೆದುಕೊಂಡಿದ್ದಾನೆ… ಈತನ ಬಗ್ಗೆ ಧ್ವನಿ ಎತ್ತಿ… ಎಂದು ಅಬ್ದುಲ್ ಎಂಬಾತ ಹಂಚಿಕೊಂಡಿದ್ದ ವಿಚಾರವನ್ನು ಬಸಿತ್ ರಿಟ್ವಿಟ್ ಮಾಡಿದ್ದರು.
ಬಸಿತ್ ರೀಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ರಾಯಭಾರಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ ನಂತರ ಬಸಿತ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದರು.