Asianet Suvarna News Asianet Suvarna News

ಸಂತ್ರಸ್ತರಿಗೆ ನೆರವಾಗಲು ಪೋಪ್ ಫ್ರಾನ್ಸಿಸ್ ಮನವಿ

  • ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಅಂತರಾಷ್ಟ್ರೀಯ ಮಟ್ಟದಲ್ಲೂ ಮನವಿ
  • ಪೋಪ್ ಫ್ರಾನ್ಸಿಸ್ ಮನವಿ 
Pope Francis request to help Kerala Flood victims
Author
Bengaluru, First Published Aug 20, 2018, 9:36 AM IST

ವ್ಯಾಟಿಕನ್ ಸಿಟಿ (ಆ. 20): ಪ್ರವಾಹದಲ್ಲಿ ಸಿಲುಕಿರುವ ಕೇರಳದ ಸಂತ್ರಸ್ತರಿಗೆ ನೆರವಾಗುವಂತೆ ಪೋಪ್ ಫ್ರಾನ್ಸಿಸ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾನುವಾರ ಕರೆ ನೀಡಿದ್ದಾರೆ.

ಸೇಂಟ್ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಅವರು ಪ್ರವಾಹ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೇರಳದ ನಿವಾಸಿಗಳು ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಮಳೆಯಿಂದಾಗಿ ಭೂ ಕುಸಿತ, ಜೀವ ಹಾನಿ ಸಂಭವಿಸಿದೆ. ಬೆಳೆ ಹಾಗೂ ಮನೆಗಳಿಗೆ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಸೋದರ ಮತ್ತು ಸೋದರಿಯರು ಕೇರಳಿಗರ ಪರ ನಿಲ್ಲುತ್ತಾರೆ ಹಾಗೂ ಅಂತಾರಾಷ್ಟ್ರೀಯ ಸಮುದಾಯದಿಂದ ಬೆಂಬಲ ವ್ಯಕ್ತವಾಗಲಿದೆ ಎಂಬ ಭರವಸೆ ಹೊಂದಿದ್ದೇನೆ ಎಂದು
ಪೋಪ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 

Follow Us:
Download App:
  • android
  • ios