ಪದೇ ಪದೇ ಅಪಘಾತ​​ ಹೆಚ್ಚಾಗುತ್ತಿರುವುದನ್ನು ಮನಗಂಡ ಗ್ರಾಮಸ್ಥರು ರಸ್ತೆಯಲ್ಲೇ ಹೋಮ ಹವನ ನಡೆಸಿ ದೇವರ ಮೊರೆ ಹೋಗಿದ್ದಾರೆ.

ತುಮಕೂರು (ಜ.31): ಪದೇ ಪದೇ ಅಪಘಾತ​​ ಹೆಚ್ಚಾಗುತ್ತಿರುವುದನ್ನು ಮನಗಂಡ ಗ್ರಾಮಸ್ಥರು ರಸ್ತೆಯಲ್ಲೇ ಹೋಮ ಹವನ ನಡೆಸಿ ದೇವರ ಮೊರೆ ಹೋಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧುಗಿರಿ ತಾಲೂಕಿನ ಹೊಸಕೆರೆಯ ಗಿರಿಯಮ್ಮನ ಪಾಳ್ಯದಲ್ಲಿ ಗ್ರಾಮಸ್ಥರು ಹೋಮ ನಡೆಸಿ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಪಾವಗಡ-ಮಳವಳ್ಳಿ ರಸ್ತೆಯ ಗಿರಿಯಮ್ಮನ ಪಾಳ್ಯ, ಪಡಸಾಲಹಟ್ಟಿ, ಹೊಸಕೆರೆ ಕೆರೆಯ ಭಾಗದವರೆಗೂ ನಿರಂತರವಾಗಿ ಅಪಘಾತ ನಡೆಯುತ್ತಿತ್ತು. ಪರಿಣಾಮ ಕಳೆದ ಎರಡು ತಿಂಗಳಲ್ಲಿ 9 ಜನರು ಸಾವನಪ್ಪಿದ್ದಾರೆ. ಬಹುತೇಕ ಸ್ಥಳೀಯರೇ‌ ಅಸುನೀಗಿದ್ದಾರೆ. ಇದರಿಂದ ಆತಂಕಗೊಳಗಾದ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಯಾವುದೇ ಅಪಘಾತಗಳು ಸಂಭವಿಸಬಾರದು ಎಂಬ ಉದ್ದೇಶದಿಂದ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೂ ವೇದ ಬ್ರಹ್ಮ ನಾಗರಾಜ ಶಾಸ್ತ್ರಿಗಳ ನೇತೃತ್ವದಲ್ಲಿ 6 ನಾನಾ ಹೋಮ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಗ್ರಾಮಸ್ಥರಿಂದ ಚಂದಾರೂಪದಲ್ಲಿ ಹಣ ಸಂಗ್ರಹಿಸಿ ಈ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದಾರೆ.