#BigExclusive: RSS ಕಾರ್ಯಕರ್ತ ರುದ್ರೇಶ್ ಕೊಲೆಯ ಹಿಂದೆ ರಾಜಕೀಯ ಸಂಘಟನೆ!
ಅಕ್ಟೋಬರ್ 16ರಂದು RSS ಪಥಸಂಚಲನ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಬೈಕ್'ನಲ್ಲಿ ಬಂದ ಆರೋಪಿಗಳು ರುದ್ರೇಶ್ ತಲೆ ಕತ್ತರಿಸಿದ್ದರು. ಆದರೆ ಇವೆಲ್ಲದರ ಬಳಿಕ ರುದ್ರೇಶ್ ಕೇವಲ RSS ಕಾರ್ಯಕರ್ತನಾಗಿರದೆ ಸಿವಿಲ್ ಕಾಂಟ್ರಾಕ್ಟರ್ ಕೂಡಾ ಆಗಿದ್ದ ಹೀಗಾಗಿ ಹಣ ಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಇವರ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿತ್ತು. ಆದರೆ ಸುವರ್ಣ ನ್ಯೂಸ್'ಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಕೊಲೆ ವೈಯುಕ್ತಿಕ ದ್ವೇಷದಿಂದ ನಡೆಯದೆ, ಸೈದ್ಧಾಂತಿಕ ಕಾರಣದಿಂದ ಕೊಲೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಬೆಂಗಳೂರು(ಅ.27): ಶಿವಾಜಿನಗರದಲ್ಲಿ ಹಾಡಹಗಲೇ ಕೊಲೆಯಾಗಿದ್ದ RSS ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಹಿಂದಿನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಆರೋಪಿಗಳು ಒಂದು ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತರೆಂಬುವುದು ಶಾಕಿಂಗ್ ನ್ಯೂಸ್.
ಈ ಕೊಲೆಯ ಹಿಂದೆ ಪ್ರಮುಖವಾಗಿ 4 ಆರೋಪಿಗಳು ಭಾಗಿಯಾಗಿದ್ದು, ಇವರಲ್ಲಿ ನವೀದ್, ನಜೀರ್ ಮತ್ತು ಮಜರ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನು ಇದರ ಹಿಂದಿನ ಪ್ರಮುಖ ಸೂತ್ರದಾರ, 4ನೇ ಆರೋಪಿಗಾಗಿ ಪೊಲೀಸರ ಹುಡುಕಾಟ ಮುಂದುವರೆಸಿದ್ದಾರೆ.
ಅಕ್ಟೋಬರ್ 16ರಂದು RSS ಪಥಸಂಚಲನ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಬೈಕ್'ನಲ್ಲಿ ಬಂದ ಆರೋಪಿಗಳು ರುದ್ರೇಶ್ ತಲೆ ಕತ್ತರಿಸಿದ್ದರು. ಆದರೆ ಇವೆಲ್ಲದರ ಬಳಿಕ ರುದ್ರೇಶ್ ಕೇವಲ RSS ಕಾರ್ಯಕರ್ತನಾಗಿರದೆ ಸಿವಿಲ್ ಕಾಂಟ್ರಾಕ್ಟರ್ ಕೂಡಾ ಆಗಿದ್ದ ಹೀಗಾಗಿ ಹಣ ಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಇವರ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿತ್ತು. ಆದರೆ ಸುವರ್ಣ ನ್ಯೂಸ್'ಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಕೊಲೆ ವೈಯುಕ್ತಿಕ ದ್ವೇಷದಿಂದ ನಡೆಯದೆ, ಸೈದ್ಧಾಂತಿಕ ಕಾರಣದಿಂದ ಕೊಲೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.