ಆದರೆ ಕಾನೂನು ಪಾಲಿಸಬೇಕಾದ ಇನ್ಸ್​ಪೆಕ್ಟರ್​ ವಿಕ್ಟರ್​ ಸೈಮನ್,​ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಮಾನತು ಮಾಡುವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಮನನೊಂದ ಪೇದೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯ ತಿಳಿದ ಮೇಲಾಧಿಕಾರಿಗಳು ಘಟನೆ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.

ಬೆಂಗಳೂರು (ಜ.17): ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಎಚ್.​​ಎಸ್​​.ಆರ್ ಲೇ ಔಟ್ ಪೊಲೀಸ್ ಠಾಣೆಯ ಅಂಜಿ ಎಂಬ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕಳೆದ ಭಾನುವಾರ ಹೆಚ್.​ಎಸ್.​ಆರ್​ ಲೇ ಔಟ್​ನಲ್ಲಿರೋ ಕಾಂಗ್ರೆಸ್ ಮುಖಂಡ ಉಗ್ರಪ್ಪ ನಿವಾಸದ ಬಳಿಯಿರುವ ನಿಜಾಂ ಎಂಬ ಹೊಟೇಲ್​’ನಲ್ಲಿ ತಡರಾತ್ರಿಯಾದರೂ ಹೆಚ್ಚಿನ ಸೌಂಡ್ ಇಟ್ಟು ಪಾರ್ಟಿ ನಡೆಯುತ್ತಿತ್ತು. ಹಾಗಾಗಿ ಅವರು ಸೌಂಡ್ ಕಡಿಮೆ ಮಾಡಿಸುವಂತೆ ಪೊಲೀಸರಲ್ಲಿ ಕೇಳಿ ಕೊಂಡಿದ್ದಾರೆ. ಹೋಟೆಲ್’ಗೆ ಹೋಗಿ ಸೌಂಡ್ ಕಡಿಮೆ ಮಾಡಲು ಹೇಳಿದ ಪೇದೆ ಜತೆ ಹೋಟೆಲ್ ಮಾಲಕರ ವಗ್ವಾದ ನಡೆಸಿದ್ದಾರೆ, ಹಾಗೂ ಠಾಣೆಯ ಇನ್ಸ್​​ಪೆಕ್ಟರ್’ಗೆ ದೂರು ನೀಡಿದ್ದ.

ಆದರೆ ಕಾನೂನು ಪಾಲಿಸಬೇಕಾದ ಇನ್ಸ್​ಪೆಕ್ಟರ್​ ವಿಕ್ಟರ್​ ಸೈಮನ್,​ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಮಾನತು ಮಾಡುವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಮನನೊಂದ ಪೇದೆ ಅಂಜಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯ ತಿಳಿದ ಮೇಲಾಧಿಕಾರಿಗಳು ಘಟನೆ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.