ವಿಟಿಯು ಉದ್ಯೋಗಿ, ವಿಕಲಚೇತನ ಮಹಿಳೆ ಶೀಲಾ ಹಾಗೂ , ಅಂಧ ಸಹೋದ್ಯೋಗಿ ಉಮೇಶ್ ಜವಳಿ ಅವರು ಇಂದು ಬೆಳಿಗ್ಗೆ ವಿಟಿಯು ಕ್ಯಾಂಪಸ್ ನಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಅಷ್ಟಕ್ಕೂ ಇವರ ದಿಢೀರ್ ಬೇಟಿಗಿದೆ ಹಲವು ಕಾರಣ.

ಬೆಂಗಳೂರು(ಡಿ.12): ಸಿಎಂ ಕುಮಾರಸ್ವಾಮಿಗೆ ಇಂದು ಅಚ್ಚರಿ ಎದುರಾಗಿತ್ತು. ದಶಕಗಳ ಹಿಂದೆ ಸಿಎಂ ಕುಮಾರಸ್ವಾಮಿ ಕೃಪೆಯಿಂದ ಉದ್ಯೋಗ ಪಡೆದುಕೊಂಡ ವಿಕಲಚೇತನ ಮಹಿಳೆ ಶೀಲಾ ಹಾಗೂ ಸಹೋದ್ಯೋಗಿ ಅಂಧ ಉಮೇಶ್ ಜವಳಿ ಇಂದು ಕುಮಾರಸ್ವಾಮಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ, ಶೀಲಾ ಹಾಗೂ ಉಮೇಶ್ ಉದ್ಯೋಗಕ್ಕಾಗಿ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ್ದ ಸಿಎಂ, ವಿಕಲಚೇತನ ಕೋಟಾದಡಿ ವಿಟಿಯುನಲ್ಲಿ ಉದ್ಯೋಗ ಕೊಡಿಸಿದ್ದರು. 

ಇದೀಗ 12 ವರ್ಷಗಳ ಬಳಿಕ ಮತ್ತೆ ಕುಮಾರಸ್ವಾಮಿಯನ್ನ ವಿಟಿಯು ಕ್ಯಾಂಪಸ್ ನಲ್ಲಿ ಭೇಟಿಯಾದ ಶೀಲಾ ಹಾಗೂ ಉಮೇಶ್ ಸಂತಸ ಹಂಚಿಕೊಂಡರು. ಇಷ್ಟೇ ಅಲ್ಲ ಹೊಸ ಬೆಳಕಿಗೆ ಕಾರಣರಾದ ಕುಮಾರಸ್ವಾಮಿಗೆ ಕೃತಜ್ಞತೆ ಸಲ್ಲಿಸಿದರು.