ದೇಶಿ ಉತ್ಫನ್ನ ತಯಾರಿಕ ಸಂಸ್ಥೆಯಾದ 'ಪತಾಂಜಲಿ'ಯ ಸಿಇಓ ಆಚಾರ್ಯ ಬಾಲಕೃಷ್ಣ ಭಾರತದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುರಾನ್ ಇಂಡಿಯಾ ರಿಚ್ 2016 ನಡೆಸಿದ ಸಮೀಕ್ಷೆಯ ಪ್ರಕಾರ ಬಾಲಕೃಷ್ಣ ರೂ 25.600 ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. ಪತಾಂಜಲಿ ಉತ್ಫನ್ನಗಳು ದೇಶದಾದ್ಯಂತ ಅಪರಿಮಿತ ಬೇಡಿಕೆ ಸೃಷ್ಟಿ ಮಾಡಿದ್ದರಿಂದ ಆದಾಯವೂ ಅದೇರೀತಿ ಹೆಚ್ಚಾಗಿದೆ.

ಪತಾಂಜಲಿಯ ಮುಖ್ಯ ಪ್ರಚಾರಕರು ಯೋಗ ಗುರು ಬಾಬಾ ರಾಮ್'ದೇವ್ ಆಗಿದ್ದರೂ, ಶೇ 94% ಒಡೆತನ 44 ವರ್ಷದ ಬಾಲಕೃಷ್ಣ ಹೆಸರಿನಲ್ಲಿದೆ.