ಭಾರತಕ್ಕೆ ಸಿಕ್ತು ಅತಿದೊಡ್ಡ ರಾಜತಾಂತ್ರಿಕ ಜಯ| ಪಾಕ್ ವಶದಲ್ಲಿದ್ದ ಭಾರತೀಯ ಪೈಲೆಟ್ ಅಭಿನಂದನ್ ಬಿಡುಗಡೆ| ನಾಳೆ ಸ್ವದೇಶಕ್ಕೆ ಮರಳಲಿರುವ ವಿಂಗ್ ಕಮಾಂಡರ್ ಅಭಿನಂದನ್| ಪೈಲೆಟ್ ಬಿಡುಗಡೆ ನಿರ್ಧಾರ ಪ್ರಕಟಿಸಿದ ಪಾಕ್ ಪ್ರಧಾನಿ| ಸಂಸತ್ತಿನಲ್ಲಿ ಬಿಡುಗಡೆ ನಿರ್ಧಾರ ಘೋಷಿಸಿದ ಇಮ್ರಾನ್ ಖಾನ್|  

ನವದೆಹಲಿ(ಫೆ.28): ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಈ ಕುರಿತು ಪಾಕ್ ಸಂಸತ್ತಿನಲ್ಲಿ ಮಾತನಾಡಿದ ಇಮ್ರಾನ್ ಖಾನ್, ನಮ್ಮ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Scroll to load tweet…

ಭಾರತೀಯ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವಂತೆ ಭಾರತ ಒತ್ತಾಯ ಮಾಡುತ್ತಲೇ ಇತ್ತು. ಸದ್ಯ ಭಾರತದ ಒತ್ತಾಯಕ್ಕೆ ಮಣಿದಿರುವ ಪಾಕ್, ಪೈಲೆಟ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಈ ಕುರಿತು ಪಾಕ್ ಸಂಸತ್ತಿನಲ್ಲಿ ಮಾತನಾಡಿದ ಇಮ್ರಾನ್ ಖಾನ್, ನಿನ್ನೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ.

Scroll to load tweet…

ಪಾಕಿಸ್ತಾನ ಶಾಂತಿ ಬಯಸುತ್ತಿದ್ದು, ಭಾರತ ಎಲ್ಲಾ ವೈಮನಸ್ಸನ್ನು ಬದಿಗಿರಿಸಿ ಶಾಂತಿ ಮಾತುಕತೆಗೆ ಮುಂದಾಗಬೇಕೆಂದು ಇಮ್ರಾನ್ ಖಾನ್ ಮತ್ತೊಮ್ಮೆ ಭಾರತಕ್ಕೆ ಮನವಿ ಮಾಡಿದ್ದಾರೆ.