ಪಾಕ್'ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ; ಇಬ್ಬರು ಭಾರತೀಯ ಯೋಧರ ಬಲಿ
ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕಿಸ್ತಾನೀಯರು ಭಾರತೀಯ ಸೇನಾ ತುಕಡಿಯೊಂದರ ಮೇಲೆ ಅಪ್ರಚೋಚಿತ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದರು.
ಶ್ರೀನಗರ(ಜುಲೈ 12): ಎರಡು ದಿನಗಳ ಹಿಂದೆ ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ನರಮೇಧ ಮಾಡಿದ ಘಟನೆ ಬೆನ್ನಲ್ಲೇ ಪಾಕಿಸ್ತಾನದ ಸೈನಿಕರು ಅಟ್ಟಹಾಸ ಮೆರೆದಿದ್ದಾರೆ. ಕುಪ್ವಾರಾದಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಾರೆ.
ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕಿಸ್ತಾನೀಯರು ಭಾರತೀಯ ಸೇನಾ ತುಕಡಿಯೊಂದರ ಮೇಲೆ ಅಪ್ರಚೋಚಿತ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದರು.
ಇದೇ ವೇಳೆ, ಮೊನ್ನೆ ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆಯ ಪ್ರಮುಖ ಮಾಸ್ಟರ್'ಮೈಂಡ್ ಎನ್ನಲಾದ ಲಷ್ಕರೆ ಉಗ್ರ ಮೊಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಅಬುಲ್ ಇಸ್ಮಾಯಿಲ್'ನನ್ನು ಹಿಡಿಯಲು ಭದ್ರತಾ ಪಡೆಗಳು ಬಹಳಷ್ಟು ಬಲೆ ಬೀಸಿವೆ. ದಕ್ಷಿಣ ಕಾಶ್ಮೀರದಲ್ಲಿ ಹೆಚ್ಚೂಕಡಿಮೆ ನಾಕಾಬಂಧಿ ಹಾಕಲಾಗಿದೆ. ಲಷ್ಕರೆ ಸಂಘಟನೆಯ ಭವಿಷ್ಯದ ನಾಯಕನೆಂದು ಕರೆಯಲಾಗುತ್ತಿರುವ ಅಬುಲ್ ಇಸ್ಮಾಯಿಲ್ ಸಿಕ್ಕಿಬೀಳುವುದು ಖಚಿತವೆನ್ನಲಾಗುತ್ತಿದೆ.